Saturday, October 21, 2023

ಮಾಜಿ ಸಚಿವ ರಮಾನಾಥ ರೈ ಇಂದಿರಾ ಕ್ಯಾಂಟೀನ್ ಗೆ ಬೇಟಿ , ಕೇಸರಿ ಬಾತ್ ಸೇವನೆ

Must read

ಬಂಟ್ವಾಳ: ಮಾಜಿ ಸಚಿವ ಬಿ.ರಮಾನಾಥ ರೈ ಅವರು ಜೂನ್ 3 ಸೋಮವಾರ ಸಂಜೆಯ ವೇಳೆ ಹಾಗೆ ಸುಮ್ಮನೆ ಬಿಸಿರೋಡಿನ ಇಂದಿರಾ ಕ್ಯಾಂಟೀನ್ ಗೆ ಬೇಟಿ ನೀಡಿದರು.


ಅವರು ಕ್ಯಾಂಟೀನ್ ಗೆ ಬೇಟಿ ನೀಡಿದ ವೇಳೆ ಸಂಜೆಯ ಉಪಾಹಾರ ಕೇಸರಿ ಬಾತ್ ತಿಂದು ರುಚಿ ಸವಿದರು.
ಈ ಸಂದರ್ಭದಲ್ಲಿ ಇಂದಿರಾ ಕ್ಯಾಂಟೀನ್ ಗೆ ಬಂದ ಅನೇಕರು ಕ್ಯಾಂಟೀನ್ ನಲ್ಲಿ ತಿಂಡಿಯ ಜೊತೆಗೆ ಚಹಾ ಕೂಡಾ ಸಿಗುವಂತೆ ಮಾಡಬೇಕು ಎಂದು ರೈ ಅವರಲ್ಲಿ ಕೇಳಿಕೊಂಡರು.
ಇವರ ಮನವಿಗೆ ಸ್ಪಂದಿಸಿದ ರಮಾನಾಥ ರೈ ಅವರು ಈ ಬಗ್ಗೆ ಸರಕಾರದ ಮಟ್ಟದಲ್ಲಿ ಚರ್ಚಿಸುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪಿ.ಎಲ್
ಡಿ.ಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್, ಪ್ರಮುಖರಾದ ಸದಾನಂದ ಶೆಟ್ಟಿ ಪಂಜಿಕಲ್ಲು, ಚಿತ್ತರಂಜನ್ ಶೆಟ್ಟಿ, ಸುರೇಶ್ ಜೊಹರಾ, ಮೋಹನ್ ಶೆಟ್ಟಿ, ಸಂತೋಷ್ ಪೂಜಾರಿ, ನಾಗೇಶ್, ಮತ್ತಿತರ ರು ಉಪಸ್ಥಿತರಿದ್ದರು.

More articles

Latest article