Tuesday, September 26, 2023

ಅಜಿಲಮೊಗರು: ಉಚಿತ ನೋಟ್ ಪುಸ್ತಕ ವಿತರಣೆ

Must read

ಅಜಿಲಮೊಗರು: ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ಕುಟ್ಟಿಕಳ ಅಜಿಲಮೊಗರು ಇಲ್ಲಿ ಕಲಿಯುತ್ತಿರುವ 2019-20ನೇ ಸಾಲಿನ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ಮತ್ತು ಶಾಲಾ ಹಿತೈಷಿಗಳಿಂದ ಉಚಿತ ನೋಟ್ ಪುಸ್ತಕ ವಿತರಣೆ ಕಾರ್ಯಕ್ರಮವು ನಿನ್ನೆ ಶಾಲೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ರುಕ್ಮಯ ಪೂಜಾರಿ ಕಿನಿಲ, ಶಾಲಾ ಮುಖ್ಯೋಪಾಧ್ಯಾಯರಾದ ಗೀತಾ ಬಾಯಿ, ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ನವೀನ್ ಶಾಂತಿ ಅಡ್ಯಾಲ್, ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ.) ಕಾರ್ಯದರ್ಶಿ ನೀತು ಪೂಜಾರಿ ಅಜಿಲಮೊಗರು, ವಲಯ ಸಿ.ಆರ್.ಪಿ ರವಿ ಕುಮಾರ್ ಸರಕಾರಿ ಶಾಲೆ ಸರಪಾಡಿ ದೈಹಿಕ ಶಿಕ್ಷಕರಾದ ಅಖಿಲ್ ಶೆಟ್ಟಿ ಜಯರಾಮ್, ಹೇಮಲತಾ, ಇಂದಿರಾ, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಹಿರಿಯ ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಪೋಷಕರು, ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದರು.
ಶಾಲಾ ಸಹ ಶಿಕ್ಷಕರಾದ ರವಿ ಕುಮಾರ್ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿ, ವಂದಿಸಿದರು.

More articles

Latest article