ವಿಟ್ಲ: ಪುಣಚ ಮನೆಲ ಕ್ರಿಸ್ತರಾಜ ದೇವಾಲಯದ ಸಮೀಪ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ ಯೇಸುಕ್ರಿಸ್ತ ದೇವರ ವಿಗ್ರಹ ಭಂಜನೆ ಮಾಡಿದ ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯ ಹಾಗೂ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಭಾನುವಾರ ಭೇಟಿ ನೀಡಿದರು. ಚರ್ಚ್ನ ಧರ್ಮಗುರು ಪ್ರಕಾಶ್ ಡಿಸೋಜಾ ಅವರಲ್ಲಿ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ ಬಳಿಕ ಕೃತ್ಯ ಎಸಗಿದ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ವಿಟ್ಲ ಠಾಣೆಯ ಎಸ್ಐ ಯವರಿಗೆ ದೂರವಾಣಿ ಮೂಲಕ ಒತ್ತಾಯಿಸಿದರು. ಇದೇ ಸ್ಥಳದಲ್ಲಿ ಹೈಮಾಸ್ಟ್ ದೀಪ ಅಳವಡಿಸಲು ಎಂಎಲ್ಸಿ ನಿಧಿಯಿಂದ ಅನುದಾನ ಒದಗಿಸುವ ಬಗ್ಗೆ ಭರವಸೆ ನೀಡಿದರು.
ಅವರೊಂದಿಗೆ ಜಿಲ್ಲಾ ಪಂಚಾಯಿತಿ ಸದಸ್ಯ ಎಂ. ಎಸ್.ಮಹಮ್ಮದ್, ಕ್ರೈಸ್ತ ಮುಖಂಡರು, ಚರ್ಚ್ಪಾಲನಾ ಸಮಿತಿ ಪದಾಧಿಕಾರಿಗಳು, ವಾಲೆ ಮುಖ್ಯಸ್ಥರು, ಕ್ರೈಸ್ತ ಬಂಧುಗಳು ಉಪಸ್ಥಿತರಿದ್ದರು.