Saturday, April 6, 2024

*ಮಾಡರ್ನ್ ಕವನ* *ಬುದ್ಧಿ*

ಬುದ್ಧಿಯೇ ಇರಬಾರದು
ಈ ಮಾನವನಿಗೆ
ಪ್ರಾಣಿಗೂ ಇವನಿಗೂ
ವ್ಯತ್ಯಾಸವೇ ಇರಬಾರದಿತ್ತು..!

ಆಗ ಬಟ್ಟೆಯ ಗೊಡವೆಯೇ ಇರುತ್ತಿರಲಿಲ್ಲ
ಬಟ್ಟೆಯಲ್ಲೇ ಶ್ರೀಮಂತಿಕೆಯ ಅಳೆಯುತ್ತಿರಲಿಲ್ಲ
ನಾಳೆಯ ರುಚಿಯೇ ಮುಖ್ಯವಾಗುತ್ತಿರಲಿಲ್ಲ
ನೂರಾರು ಪ್ಲೇವರ್ ಗಳು ಹುಟ್ಟುತ್ತಲೇ ಇರಲಿಲ್ಲ
ಇರಲೊಂದು ಸುಂದರ ಮನೆಬೇಕೆಂಬ
ಆಸೆ ಬೆಳೆಯುತ್ತಿರಲಿಲ್ಲ
ಆಸೆ ಪೂರೈಕೆಗೆ ಪ್ರಕೃತಿಯ ನಾಶವಾಗುತ್ತಿರಲಿಲ್ಲ
ನಿದ್ದೆಗೊಂದು ತಲೆದಿಂಬಿನ ಬೇಡಿಕೆ ಇಡುತ್ತಿರಲಿಲ್ಲ
ನನಸಾಗಿಸುವ ಪ್ರಯತ್ನದ ಕನಸುಗಳು ಹುಟ್ಟುತ್ತಿರಲಿಲ್ಲ..!

ಸಾವಿರಾರು ದೇವರು
ಊರಿಗೊಂದು ಹೆಸರು
ಜಾತಿ ಗೀತಿ
ಬಡವ ಬಲ್ಲಿದ
ವಿದ್ಯಾವಂತ ಅವಿದ್ಯಾವಂತ
ಯಾವುದು ಕಾಣಸಿಗುತ್ತಿರಲಿಲ್ಲ..!

ತಿಂದು ಮಲಗೋದು ಜೀವನ
ಸಸ್ಯಹಾರಿಯಾದರೆ ಆಯ್ದು ತಿನ್ನೊದು
ಮಾಂಸಹಾರಿಯಾದರೆ ಬೇಟೆಯಾಡೋದು
ಸ್ವಾರ್ಥ ಗಳಿಲ್ಲ
ಮುಗಿಲೆತ್ತರದ ಆಸೆಗಳಿಲ್ಲ
ಸತ್ತಾಗಲು ತಿಥಿ ಬೇಕಾಗಿಲ್ಲ
ಸತ್ತ ಹೆಣವು ಹದ್ದಿಗೋ ನರಿಗೋ
ಹೊಟ್ಟೆ ತುಂಬಿಸುತ್ತಿತ್ತು
ಅಂತೂ ಬೂದಿಯಾಗಿ ಹೋಗುತ್ತಿರಲಿಲ್ಲ..!

ಅವನಂತೆ ನಾನಾಗಬೇಕು
ಊರಿಗೆ ಅರಸನಾಗಬೇಕು
ಚಂದ್ರನ ಮೇಲೆ ಲಗ್ಗೆ ಇಡಬೇಕು
ಭೂಮಿಯನ್ನು ಅಳೆಯಬೇಕು
ಸಮುದ್ರವನ್ನ ಈಜಬೇಕು
ಈ ಯಾವ ಮಹದಾಸೆಗಳು ಇರುತ್ತಿರಲ್ಲ…

ಪ್ರಕೃತಿಯಲ್ಲಿ
ಸುಖದ ಬೆನ್ನಟ್ಟುವ
ದುಃಖಿ ಜೀವಿ ನಾನಾಗುತ್ತಿರಲ್ಲಿಲ್ಲ…!

 

✍ಯತೀಶ್ ಕಾಮಾಜೆ

More from the blog

ಕೊಳವೆ ಬಾವಿಗೆ ಬಿದ್ದ 2 ವರ್ಷದ ಕಂದಮ್ಮ : ರಕ್ಷಣೆಗೆ ಅರ್ಧ ಅಡಿಯಷ್ಟೇ ಬಾಕಿ

ವಿಜಯಪುರ: ಕೊಳವೆ ಬಾವಿಗೆ ಬಿದ್ದಿರುವ ಮಗು ಸಾತ್ವಿಕ ಸುರಕ್ಷಿತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತಕ್ಕೆ ಬಂದಿದೆ. ಮಗು ಸುರಕ್ಷಿತವಾಗಿದ್ದು, ಕಾರ್ಯಾಚರಣೆ ಆಶಾದಾಯಕವಾಗಿದೆ. 16 ಅಡಿ ಆಳದಲ್ಲಿರುವ ಸಾತ್ವಿಕ್ ರಕ್ಷಣೆಗಾಗಿ 22 ಅಡಿ ಆಳದವರೆಗೆ ಸುರಂಗ...

ಮಿತಿ ಮೀರಿದ ತಾಪಮಾನ : ಖಡಕ್​ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ

ಬೆಂಗಳೂರು: ರಾಜ್ಯದಲ್ಲಿ ಬಿರು ಬಿಸಿಲು ಹೆಚ್ಚಳವಾಗುತ್ತಿದ್ದು ಮುಂದಿನ 14 ದಿನಗಳ ಕಾಲ ಬಿಸಿಗಾಳಿ ಬೀಸಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ (KSNDMC) ಮುನ್ಸೂಚನೆ ನೀಡಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಏಪ್ರಿಲ್​...

ಮನೆಯ ಮಹಡಿಯಿಂದ ಬಿದ್ದು ಬಾಲಕ ಸಾವು

ಬಂಟ್ವಾಳ: ಮನೆಯ ಮಹಡಿಯ ಮೇಲಿಂದ ಕೆಳಗೆ ಬಿದ್ದು ಬಾಲಕನೋರ್ವ ಮೃತಪಟ್ಟ ಘಟನೆ ಎ.‌ ೧ರ ಮುಂಜಾನೆ ನಡೆದಿದೆ. ಬಂಟ್ವಾಳ ಜಕ್ರಿಬೆಟ್ಟು ನಿವಾಸಿ ದಿನೇಶ್ ಪೂಜಾರಿ ಅವರ ಪುತ್ರ ಆದಿಶ್(೧೫) ಮೃತಪಟ್ಟ ಬಾಲಕ. ಆತ ಮನೆಯಲ್ಲಿ ದೊಡ್ಡಮ್ಮನ...

ಮಾಂಸ ಪ್ರಿಯರಿಗೆ ಬೆಲೆ ಏರಿಕೆ ಶಾಕ್.. ಕೋಳಿ ಮಾಂಸದ ದರ ಏರಿಕೆ

ಮಂಗಳೂರು: ಕೋಳಿಮಾಂಸ, ಮೀನಿನ ದರ ಏರುಗತಿ ಯಲ್ಲಿ ಸಾಗುತ್ತಿದ್ದು ಮಾಂಸಾಹಾರ ಪ್ರಿಯರ ಜೇಬಿಗೂ ಕತ್ತರಿ ಬೀಳುವಂತಾಗಿದೆ. ಪ್ರಸ್ತುತ ಕೋಳಿಮಾಂಸಕ್ಕೆ (ವಿದ್‌ ಸ್ಕಿನ್‌) ಕೆ.ಜಿ.ಗೆ ಬ್ರಾಯ್ಲರ್‌ ಕೆಲವು ಕಡೆ 235-240 ರೂ., ಟೈಸನ್‌ 270 ರೂ....