Sunday, April 7, 2024

*ಸತ್ತ ಕಾರಣ*

ಸಾವು ? ಸಾವು
ಬರಬಾರದಿತ್ತು ಅವನಿಗೆ
ಹೀಗೆ ಎಲ್ಲ ಕಳಚಿ ಬೆತ್ತಲೆ
ಮಾಡಿ ಹೋಗಬಾರದಿತ್ತು
ಅದೂ ಎಲ್ಲರೆದುರು ಝಗ
ಮಗಿಸುವ ಸುಡು ಹಗಲಿನಲಿ!

ಪಾ…ಪ!
ಬೆತ್ತಲೆಯಾಟಕೆ ಸೋತು
ಅದಕೆ ಗೂಟ ಜಡಿದೇ
ಮಠದಂಗಳದಿ ಆಳವಾಗಿ
ಬೇರು ಬಿಟ್ಟು ಗರ್ಭ ಗುಡಿಯ
ಒಳಗಡೆ ನಿರ್ಭಾವದಿ ಕುಳಿತ!

ದೇವರ ದಿಟ್ಟಿಸುತ
ತನ್ನಾಸೆಯ ಹೂ
ಹಣ್ಣು ಕಾಯಿಗಳನೆಲ್ಲ
ಬಂದವರ ನೊಂದವರ
ಉಡಿಯಲಿ ಮಡಿಲಲಿ
ಹಾಕಿ ಪುನೀತನಾದ !

ಇಂಥ ಜೀವಕೆ
ಸಾವು ಬರಬಾರದಿತ್ತು!
ಯಾರ್ಯಾರನ್ನೋ ಹೇಗ್ಹೇಗೋ
ಹೊತ್ತೊಯ್ಯುವ ಯಮ
ಸುಮ್ಮನಿದ್ದರೂ ಕಿತಾಪತಿ
ಚಿತ್ರಗುಪ್ತನ ಕಾರುಬಾರಿಗೆ
ಲಗಾಮು ಹಾಕಲಿಲ್ಲ ಅಂತೀರಾ ?

ಇಲ್ಲ ಇಲ್ಲ ..
ಯಮ ಹಾಕಿದ ಲಗಾಮು
ಚಿತ್ರಗುಪ್ತ ಅವನ ಕೋಣನಿಗೆ
ಹಾಕಿ ಯಮನನ್ನೇ ಯಾಮಾರಿಸಿ
ಇವನ ಕೋಮಲ ಕೊರಳಿಗೆ
ಕಳಚದ ನೇಣು ಬಿಗಿದ!

ಬಿಳಿ ಹಾಳೆಯಲಿ ಕರಿಯ
ಅಕ್ಷರಗಳ ಬರೆದ ಯಮನ
ಹೆಸರಿನ ಚೀಟಿಯನು ಅವನ
ಮೇಜಿನ ಮೇಲಿಟ್ಟು ಓಡಿದ
ಮೋಜು ನೋಡಿದ !

ಅಂತೂ ಇಂತೂ
ತಲೆ ಕೆರೆವವರ ಕೈಗೆ ಬೆಣಚು
ಗಲ್ಲನಿಟ್ಟು ಸತ್ತವನಿಗೊಂದು
ದಾರಿ ತೋರಿ ಮಾಯವಾದ !
ಮುಂದಿನ ಕರ್ಮ-ಕ್ರಮ
(ಆ)ರಕ್ಷಕರಿಗೇ ಬಿಟ್ಟ!

 

#ನೀ.ಶ್ರೀ ಶೈಲ ಹುಲ್ಲೂರು

More from the blog

ಕೊಳವೆ ಬಾವಿಗೆ ಬಿದ್ದ 2 ವರ್ಷದ ಕಂದಮ್ಮ : ರಕ್ಷಣೆಗೆ ಅರ್ಧ ಅಡಿಯಷ್ಟೇ ಬಾಕಿ

ವಿಜಯಪುರ: ಕೊಳವೆ ಬಾವಿಗೆ ಬಿದ್ದಿರುವ ಮಗು ಸಾತ್ವಿಕ ಸುರಕ್ಷಿತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತಕ್ಕೆ ಬಂದಿದೆ. ಮಗು ಸುರಕ್ಷಿತವಾಗಿದ್ದು, ಕಾರ್ಯಾಚರಣೆ ಆಶಾದಾಯಕವಾಗಿದೆ. 16 ಅಡಿ ಆಳದಲ್ಲಿರುವ ಸಾತ್ವಿಕ್ ರಕ್ಷಣೆಗಾಗಿ 22 ಅಡಿ ಆಳದವರೆಗೆ ಸುರಂಗ...

ಮಿತಿ ಮೀರಿದ ತಾಪಮಾನ : ಖಡಕ್​ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ

ಬೆಂಗಳೂರು: ರಾಜ್ಯದಲ್ಲಿ ಬಿರು ಬಿಸಿಲು ಹೆಚ್ಚಳವಾಗುತ್ತಿದ್ದು ಮುಂದಿನ 14 ದಿನಗಳ ಕಾಲ ಬಿಸಿಗಾಳಿ ಬೀಸಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ (KSNDMC) ಮುನ್ಸೂಚನೆ ನೀಡಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಏಪ್ರಿಲ್​...

ಮನೆಯ ಮಹಡಿಯಿಂದ ಬಿದ್ದು ಬಾಲಕ ಸಾವು

ಬಂಟ್ವಾಳ: ಮನೆಯ ಮಹಡಿಯ ಮೇಲಿಂದ ಕೆಳಗೆ ಬಿದ್ದು ಬಾಲಕನೋರ್ವ ಮೃತಪಟ್ಟ ಘಟನೆ ಎ.‌ ೧ರ ಮುಂಜಾನೆ ನಡೆದಿದೆ. ಬಂಟ್ವಾಳ ಜಕ್ರಿಬೆಟ್ಟು ನಿವಾಸಿ ದಿನೇಶ್ ಪೂಜಾರಿ ಅವರ ಪುತ್ರ ಆದಿಶ್(೧೫) ಮೃತಪಟ್ಟ ಬಾಲಕ. ಆತ ಮನೆಯಲ್ಲಿ ದೊಡ್ಡಮ್ಮನ...

ಮಾಂಸ ಪ್ರಿಯರಿಗೆ ಬೆಲೆ ಏರಿಕೆ ಶಾಕ್.. ಕೋಳಿ ಮಾಂಸದ ದರ ಏರಿಕೆ

ಮಂಗಳೂರು: ಕೋಳಿಮಾಂಸ, ಮೀನಿನ ದರ ಏರುಗತಿ ಯಲ್ಲಿ ಸಾಗುತ್ತಿದ್ದು ಮಾಂಸಾಹಾರ ಪ್ರಿಯರ ಜೇಬಿಗೂ ಕತ್ತರಿ ಬೀಳುವಂತಾಗಿದೆ. ಪ್ರಸ್ತುತ ಕೋಳಿಮಾಂಸಕ್ಕೆ (ವಿದ್‌ ಸ್ಕಿನ್‌) ಕೆ.ಜಿ.ಗೆ ಬ್ರಾಯ್ಲರ್‌ ಕೆಲವು ಕಡೆ 235-240 ರೂ., ಟೈಸನ್‌ 270 ರೂ....