ದ.ಕ. ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಪರವಾಗಿ ಜಿ.ಪಂ ಸದಸ್ಯ ಎಂ. ತುಂಗಪ್ಪ ಬಂಗೇರ ಅವರ ನೇತೃತ್ವದಲ್ಲಿ ಚೆನ್ನೈತ್ತೋಡಿ ಗ್ರಾ.ಪಂ. ವ್ಯಾಪ್ತಿಯ ಮಾವಿನ ಕಟ್ಟೆ ಪರಿಸರದಲ್ಲಿ ಮತ ಯಾಚನೆ ನಡೆಯಿತು. ಮಾವಿನಕಟ್ಟೆ ಯಜಮಾನ್ ಕ್ಯಾಶ್ಯು ಫ್ಯಾಕ್ಟರಿ ಯ ವರದರಾಜ ಪೈ ಅವರಲ್ಲಿಗೆ ಭೇಟಿ ನೀಡಿ ಮತ ಯಾಚಿಸಿದರು. ಬಿಜೆಪಿ ಪ್ರಮುಖ ರಾದ ಯಶೋಧರ ಶೆಟ್ಟಿ ದಂಡೆ, ಚಂದ್ರಶೇಖರ ಶೆಟ್ಟಿ, ಮಹಾಬಲ ಶೆಟ್ಟಿ, ವಿಜಯ ರೈ, ದಿನೇಶ್ ಶೆಟ್ಟಿ ದಂಬೆದಾರ್ ಮತ್ತಿತರ ಕಾರ್ಯಕರ್ತರು ಭಾಗವಹಿಸಿದ್ದರು.


