Monday, September 25, 2023
More

    ಕಾರು ಹೊಂಡಕ್ಕೆ ಬಿದ್ದು ಒರ್ವ ಮ್ರತಪಟ್ಟು ಐವರು ಗಂಭೀರ ಗಾಯ

    Must read

    ಬಂಟ್ವಾಳ; ಚಾಲಕನ ನಿಯಂತ್ರಣ ತಪ್ಪಿ ಕಾರು ಹೊಂಡ ಕ್ಕೆ ಬಿದ್ದು ಒರ್ವ ಮ್ರತಪಟ್ಟು ಒಂದೇ ಮನೆಯ ಐವರು ಗಂಬೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಬಿಸಿರೋಡಿನ ಮುಖ್ಯ ವ್ರತ್ತದ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
    ಮಂಗಳೂರು ಬಜಾಲ್ ನಿವಾಸಿ ಕೆ.ಎಮ್. ಶರೀಫ್ ಮ್ರತಪಟ್ಟಿದ್ದಾರೆ. ಶರೀಫ್ ಅವರ ಪತ್ನಿ ಜಮೀಲಾ, ಮಕ್ಕಳಾದ ಸಫ್ ನಾಜ್, ಸಫಾ, ಸಫ್ ವಾನ್, ಸಫ್ರೀನಾ ಅವರು ಗಂಭೀರ ಸ್ವರೂಪದ ಗಾಯಗಳಾಗಿ ಮಂಗಳೂರು ಖಾಸಗಿ ಆಸ್ಪತ್ರೆ ಗೆ ದಾಖಲಾಗಿದ್ದಾರೆ.
    ಒಂದೇ ಮನೆಯ ಸದಸ್ಯರು ಪುತ್ತೂರು ಸಂಬಂಧಿಕರ ಗ್ರಹಪ್ರವೇಶ ಕಾರ್ಯಕ್ರಮ ಕ್ಕೆ ತೆರಳಿ , ಕಾರ್ಯಕ್ರಮ ಮುಗಿಸಿ ವಾಪಾಸು ಮಂಗಳೂರು ಕಡೆ ಗೆ ಹೋಗುವ ವೇಳೆ ಬಿಸಿರೋಡಿನ ಲ್ಲಿ ನಡೆದಿದೆ.ಮ್ರತ ಶರೀಫ್ ಅವರ ಹಿರಿ ಮಗ ಸಫ್ವಾನ್ ಅವರು ಚಾಲನೆ ಮಾಡುತ್ತಿದ್ದರು, ಪುತ್ತೂರಿನಿಂದ ಕಾರ್ಯ ಮುಗಿಸಿ ಮನೆಗೆ ತೆರಳುವ ವೇಳೆ ಅತೀ ವೇಗದ ಚಾಲನೆಯಾ ಅಥವಾ ಒವರ್ ಟೇಕ್ ಮಾಡಿದ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿ ಬಿಸಿರೋಡಿನ ಲ್ಲಿ ಹೊಂಡಕ್ಕೆ ಬಿದ್ದ ಘಟನೆ ನಡೆದಿದೆ ಯಾ ಎನ್ನುವುದು ತನಿಖೆಯ ಬಳಿಕ ಗೊತ್ತಾಗಬೇಕಾಗಿದೆ.‌
    ಘಟನಾ ಸ್ಥಳ ಕ್ಕೆ ಬಂಟ್ವಾಳ ಟ್ರಾಫಿಕ್ ಎಸ್.ಐ.ಮಂಜುನಾಥ, ಎ.ಎಸ್.ಐ.ಕುಟ್ಟಿ, ಸಿಬ್ಬಂದಿ ಗಳಾದ ಮೋನಪ್ಪ, ಕ್ರಷ್ಣ ಬೇಟಿ ನೀಡಿ ಮುಂದಿನ ‌ಕ್ರಮಕೈಗೊಂಡಿದ್ದಾರೆ.

    More articles

    LEAVE A REPLY

    Please enter your comment!
    Please enter your name here

    Latest article