Thursday, April 11, 2024

ಬಡವರು ಉಳಿತಾಯದ ಜೊತೆ ಸ್ವಾಭಿಮಾನದ ಬದುಕು ನಡೆಸಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರಣ: ಡಾ| ಎಚ್.ಎಲ್.ಮಂಜುನಾಥ್

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ (ರಿ.) ಬಂಟ್ವಾಳ ತಾಲೂಕು ಇದರ ಪ್ರಗತಿ ಬಂಧು/ ಸ್ವಸಹಾಯ ಸಂಘಗಳ ಒಕ್ಕೂಟದ ಪದಗ್ರಹಣ ಸಮಾರಂಭ ಬಿಸಿರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ|ಎಲ್ .ಎಚ್.ಮಂಜುನಾಥ್  ಉದ್ಘಾಟಿಸಿ ಮಾತನಾಡಿದ ಅವರು ಗ್ರಾಮಾಭಿವೃದ್ದಿಯ ಮೂಲಕ ಮಹಿಳೆಯರಿಗೆ ಆರ್ಥಿಕ ಶಕ್ತಿಯನ್ನು ನೀಡಿದಾಗ ಮಹತ್ತರ ಬದಲಾವಣೆಗಳು ಆಗಲು ಸಾಧ್ಯವಾಯಿತು. ‌ಇದಕ್ಕೆ ಗ್ರಾಮಾಭಿವೃದ್ದಿಯ ಚಳುವಳಿಯೇ ಕಾರಣ.

ಯೋಜನೆಯ ಶಿಸ್ತು , ಅತ್ಯುತ್ತಮ ವ್ಯವಸ್ಥೆ , ನಡವಳಿಕೆಯ ಬಗ್ಗೆ ವಿಶೇಷವಾದ ಗೌರವ ಇದೆ. ಹದಿನಾಲ್ಕು ವರ್ಷಗಳಲ್ಲಿ ಸುಮಾರು 850 ಕೋಟಿ ಸಾಲ ಬ್ಯಾಂಕ್ ನೀಡಿದೆ.
ಹಣವನ್ನು ಸ್ವುಉದ್ಯೋಗ ಮಾಡಲು ಬಳಕೆ ಮಾಡಲು ವಿನಂತಿಸಿದರು. ಪ್ರತಿಯೊಬ್ಬರು ಜೀವನ ಭದ್ರತೆ ಮಾಡಿಕೊಳ್ಳಿ.
ಯೋಜನೆಯವರು ಸ್ವ ಉದ್ಯಮ ಮಾಡುವವರಿಗೆ ಮೂರು ಲಕ್ಷ ಸಾಲ ನೀಡುವ ವ್ಯವಸ್ಥೆ ಯನ್ನು ಸಿಡ್ ಬಿ ಸಂಸ್ಥೆ ಯಿಂದ ಪಡೆದುಕೊಳ್ಳಬಹುದು ಎಂದು ಅವರು ತಿಳಿಸಿದರು.
ಬಡವರು ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಲು ಸ್ವಸಹಾಯ ಚಳುವಳಿಯನ್ನು ಪೂಜ್ಯರು ಮಾಡಿದ್ದಾರೆ ಎಂದರು.

ಇವತ್ತು ಕೂಡಾ 30 ಸಾವಿರ ಕುಟುಂಬ ದ 155 ಕೋಟಿ ರೂ ಮೊತ್ತ ಚಾಲ್ತಿ ಖಾತೆಯಲ್ಲಿದೆ. ಈ ಬಾರಿ ಧರ್ಮಸ್ಥಳದಲ್ಲಿ ನಡೆಯುವ ಮಹಾಮಸ್ತಾಭಿಷೇಕದ ಸಂದರ್ಭದಲ್ಲಿ ಡಾ, ಡಿ.ವೀರೇಂದ್ರ ಹೆಗ್ಗಡೆ ಯವರು ಅಟೋ ರಿಕ್ಷಾ ತೆಗೆದುಕೊಳ್ಳುವ ಯೋಜನೆಯ ಸದಸ್ಯರಿಗೆ ಕ್ಷೇತ್ರದ ವತಿಯಿಂದ ಹತ್ತು ಸಾವಿರ ರೂ ನೀಡುವ ಘೋಷಣೆಯನ್ನು ಮಾಡಿದ್ದಾರೆ.
ಸ್ವಸಹಾಯ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ ಘೋಷಣೆ ಕೂಡಾ ಪೂಜ್ಯರು ಮಾಡಿದ್ದಾರೆ ಎಂದು ತಿಳಿಸಿದರು.
ಶಿಷ್ಯ ವೇತನ ಕಾರ್ಯಕ್ರಮದಿಂದಾಗಿ ಸ್ವಸಹಾಯ ಗುಂಪಿನ ಸದಸ್ಯರ ಮಕ್ಕಳ ಶೈಕ್ಷಣಿಕ ಸುಧಾರಣೆ ಸಾಧ್ಯವಾಗಿದೆ ಎಂದರು.
12 ಕೋಟಿ ವೆಚ್ಚದಲಿ 200 ಕೆರೆಗಳ ದುರಸ್ತಿ ಕಾರ್ಯ ಯೋಜನೆಯಿಂದ ನಡೆದಿದೆ ಎಂಬುದು ಸಂತೋಷದ ವಿಷಯ ಎಂದರು.

ದೇವರು, ಗುರು, ಹಿರಿಯರಿಗೆ ಗೌರವ ನೀಡುವ ಮತ್ತು ಮಕ್ಕಳಿಗೆ ಸಂಸ್ಕ್ರತಿ ಯನ್ನು ಮೂಡಿಸುವ ಕೆಲಸ ತಾಯಂದಿರು ಮಾಡಬೇಕು.
ಮಕ್ಕಳು ದಾರಿ ತಪ್ಪಲು ಮೊಬೈಲ್ ಮತ್ತು ಟಿ.ವಿ ಯೇ ಕಾರಣ ಎಂದು ಅವರು ಈ ಸಂದರ್ಭದಲ್ಲಿ ಹೇಳಿ ದರು.
ಮದ್ಯಪಾನ ಮತ್ತು ಡ್ರಗ್ಸ್ ಮಾಫಿಯಾ ಸಮಾಜವನ್ನು ಕೆಡಿಸುತ್ತಿದೆ, ಮಕ್ಕಳು ದುಶ್ಚಟಗಳಿಗೆ ಬೀಳದಂತೆ ತಾಯಂದಿರು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಅಧ್ಯಕ್ಷ ಸದಾನಂದ ನಾವೂರ ವಹಿಸಿದ್ದರು.

ಶಾಸಕ ರಾಜೇಶ್ ನಾಯಕ್ ಮಾತನಾಡಿ ಹೊಸ ಚಿಂತನೆಗಳಿಂದ ಯೋಜನೆ ಬೆಳವಣಿಗೆಯನ್ನು ಸಾಧಿಸಿದೆ. ಇನ್ನಷ್ಟು ತಾಲೂಕಿನಲ್ಲಿ ಸಾಧನೆಯನ್ನು ಮಾಡಲು ಅವಕಾಶಗಳು ಒದಗಿ ಬರಲಿ ಎಂದು ಹಾರೈಸಿದರು.

ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿದ್ದ ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ, ಮಾತನಾಡಿ ಯೋಜನೆಯ ಮೂಲಕ ತಾಲೂಕಿನ ಪ್ರತಿ ಮನೆಯನ್ನು ಬೆಳಗಿಸುವ ಕೆಲಸ ಮಾಡಿದ ಕ್ಷೇತ್ರಕ್ಕೆ ವಿಶೇಷ ಅಭಿನಂದನೆ ಸಲ್ಲಿಸಿದ್ದಾರೆ.
ಉಳಿತಾಯದ ಜೊತೆ ಸ್ವಾಭಿಮಾನದ ಬದುಕು ಯೋಜನೆ ನೀಡಿದೆ. ಸರಕಾರ ಮಾಡದಂತಹ ಅನೇಕ ಜನಪರ ಯೋಜನೆ ಕ್ಷೇತ್ರದ ಯೋಜನೆ ಮಾಡಿ ತೋರಿಸಿದೆ ಎಂದು ಅವರು ಹೇಳಿದರು.
ವೇದಿಕೆಯಲ್ಲಿ ಯೋಜನೆಯ ಜಿಲ್ಲಾ ನಿರ್ದೇಶಕ ಚಂದ್ರಶೇಖರ್ ನೆಲ್ಯಾಡಿ , ಜನಜಾಗ್ರತಿ ವೇದಿಕೆಯ ಅಧ್ಯಕ್ಷ ಬಾಲಕೃಷ್ಣ ಆಳ್ವ, ಕೇಂದ್ರ ಒಕ್ಕೂಟದ ಸಮಿತಿಯ ನೂತನ ಅದ್ಯಕ್ಷ ಮಾದವ ವಳವೂರು, ಉಪಸ್ಥಿತರಿದ್ದರು.
ಯೋಜನಾಧಿಕಾರಿ ಜಯಾನಂದ ಪಿ ವರದಿವಾಚಿಸಿದರು. ಜಿಲ್ಲಾ ನಿರ್ದೇಶಕ ಚಂದ್ರಶೇಖರ್ ನೆಲ್ಯಾಡಿ ಸ್ವಾಗತಿಸಿ, ಮೇಲ್ವಿಚಾರಕ ರಮೇಶ್ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಯೋಜನೆಯ ವಿವಿಧ ವೇತನಗಳನ್ನು ಫಲಾನುಭವಿಗಳಿಗೆ ನೀಡಲಾಯಿತು. ‌

More from the blog

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ವಾರ್ಷಿಕ ಜಾತ್ರೆ..ಮಹಾರಥೋತ್ಸವ ಕಣ್ಣುಂಬಿಕೊಂಡ ಸಾವಿರಾರು ಭಕ್ತರು

ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆಯಲ್ಲಿ ಎ. ೧೧ರಂದು ಸಂಜೆ ರಥೋತ್ಸವ ನಡೆಯಿತು. ಜಾತ್ರೆಯಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ಮಹಾಪೂಜೆಯ ಬಳಿಕ ದೇವರು ರಥಾರೋಹಣಗೊಂಡು ಸಾಂಕೇತಿಕವಾಗಿ ರಥವನ್ನು ಎಳೆಯಲಾಯಿತು. ಮಧ್ಯಾಹ್ನ ರಥಕ್ಕೆ...

ಬಂಟ್ವಾಳದ ಬಡಗಕಜೆಕಾರು, ತೆಂಕಕಜೆಕಾರು ಗ್ರಾಮದಲ್ಲಿ ಮತದಾರರ ಮನೆಗೆ ಭೇಟಿ ನೀಡಿ ಮತಯಾಚನೆ ನಡೆಸಿದ ಶಾಸಕ ರಾಜೇಶ್ ನಾಯ್ಕ್

ಲೋಕ ಸಭಾ ಚುನಾವಣೆಯ ಹಿನ್ನಲೆಯಲ್ಲಿ ಕ್ಯಾ.ಬ್ರಿಜೇಶ್ ಚೌಟ ಅವರ ಗೆಲುವಿಗಾಗಿ "ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಗ್ರಾಮ,ಮನೆ,ಮನ ಸಂಪರ್ಕ ಅಭಿಯಾನ"ದ ಅಂಗವಾಗಿ ಬಂಟ್ವಾಳದ ಬಡಗಕಜೆಕಾರು, ತೆಂಕಕಜೆಕಾರು ಗ್ರಾಮದಲ್ಲಿ ಮತದಾರರ ಮನೆಗೆ...

ಲೋಕಸಭಾ ಚುನಾವಣೆಯ ಹಿನ್ನೆಲೆ : ಚಾರ್ಮಾಡಿಯ ಮೂವರು ಗಡಿಪಾರು

ಬೆಳ್ತಂಗಡಿ: ಚುನಾವಣ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಹಾಗೂ ಕೋಮು ಗಲಭೆಗಳಲ್ಲಿ ಭಾಗವಹಿಸುವ ಸಾಧ್ಯತೆ ಇರುವ ಕಾರಣ ಮೂವರು ರೌಡಿಶೀಟರ್‌ಗಳನ್ನು ಧರ್ಮಸ್ಥಳ ಪೊಲೀಸರು ಗಡಿಪಾರು ಮಾಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ನಿವಾಸಿಗಳಾದ...

ಹಿತೈಷಿ ತರಬೇತಿ ಕೇಂದ್ರದ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಫಲಿತಾಂಶದೊಂದಿಗೆ ತೇರ್ಗಡೆ

2023-24ನೇ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಪಾಣೆಮಂಗಳೂರು, ನರಿಕೊಂಬುವಿನಲ್ಲಿರುವ ಹಿತೈಷಿ ತರಬೇತಿ ಕೇಂದ್ರದ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ. ಕು.ಕೀರ್ತನ ಶೇ.95.6% ಅಂಕಗಳೊಂದಿಗೆ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ ಎಂದು ಸಂಸ್ಥೆಯ ಪ್ರಕಟನೆಯಲ್ಲಿ ತಿಳಿಸಲಾಗಿದೆ. 2024-25ನೇ...