Friday, October 20, 2023

ಆಸರೆ ಗೆಳೆಯರ ಬಳಗದಿಂದ ಎರಡು‌ ಕುಟುಂಬಕ್ಕೆ ರೂ.44,000/- ಸಹಾಯ ಧನ ಹಸ್ತಾಂತರ

Must read

ಮಂಗಳೂರು: ಫೆ. 10. ದುಡಿದು ಮನೆ ಸಂಸಾರಕ್ಕೆ ಆಧಾರವಾಗಿದ್ದ ಹರೆಯದ ಮಗನನ್ನು ರಸ್ತೆ ಅಪಘಾತದಲ್ಲಿ ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದ ಬಂಟ್ವಾಳದ ಲಕ್ಷ್ಮೀಯವರಿಗೆ ಮತ್ತು ಪತಿಯಿಂದ ಪರಿತ್ಯಕ್ತೆಯಾಗಿ ಹದಿ ಹರೆಯದ ಮಗಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಪುತ್ತೂರಿನ ಕುಸುಮರವರಿಗೆ ಸ್ವಂತ ಮನೆ ಕಟ್ಟಲು ಸಹಕರಿಸುವ ನಿಟ್ಟಿನಲ್ಲಿ ಅಡ್ಮಿನ್ ಹೇಮಂತ್ ಕುಮಾರ್ ಕಿನ್ನಿಗೋಳಿಯವರ ನೇತೃತ್ವದಲ್ಲಿ ಆಸರೆ ಗೆಳೆಯರ ಬಳಗದಿಂದ ಸಹಾಯ ಧನ ಸಂಗ್ರಹಿಸುವ ಅಭಿಯಾನದಲ್ಲಿ ಸಹೃದಯಿ ದಾನಿಗಳಿಂದ ಸಂಗ್ರಹಿಸಿದ ₹ 44000/- ಗಳನ್ನು ಸಂತೃಸ್ತರಿಗೆ ₹ 22000/- ದಂತೆ ಸಮಾನವಾಗಿ ದಿನಾಂಕ 10/ 02/ 2019 ರ ಭಾನುವಾರ ಮಂಗಳೂರು ಪೋಲಿಸ್ ಲೇನ್ ನ ಶ್ರೀ ದೇವಿ ದೇವಸ್ಥಾನದಲ್ಲಿ ಹಸ್ತಾಂತರಿಸಲಾಯಿತು.

ಸಹಾಯ ಧನ ಹಸ್ತಾಂತರದ ಸಂದರ್ಭದಲ್ಲಿ ಸತ್ಯಜಿತ್ ಸುರತ್ಕಲ್ ಹಿಂದುಳಿದ ವರ್ಗಗಳ ರಾಜ್ಯ ಪ್ರಧಾನ ಕಾರ್ಯದರ್ಶಿ(ಬಿ.ಜೆ.ಪಿ) ಮತ್ತು ಆಸರೆ ಬಳಗದ ನಿರ್ವಾಹಕರಾದ ಹೇಮಂತ್ ಕುಮಾರ್ ಕಿನ್ನಿಗೋಳಿ , ಸದಸ್ಯರಾದ ರಮೇಶ್ ಕುಮಾರ್ ವಗ್ಗ, ರಂಜಿತ್ ಕುಮಾರ್ ಮೂಡಬಿದರೆ, ನಿತೇಶ್ ಕುಕ್ಯಾನ್ ಏಳಿಂಜೆ, ಕಿರಣ್ ಕುಲಾಲ್ ಮರಕಡ, ದಿನೇಶ್ ಕುಲಾಲ್ ಬೀಡು, ನರೇಶ್ ಕೆ.ಟಿ. ಬೆಳ್ತಂಗಡಿ, ಅರುಣ್ ಕುಲಾಲ್ ಮೂಳೂರು, ಉದಯ್ ಕುಲಾಲ್ ಕಳತ್ತೂರು, ಚಂದ್ರ ಪ್ರಭಾ ಮಂಗಳೂರು, ಅನಿಲ್ ಪೂಜಾರಿ ಮಂಗಳೂರು ಉಪಸ್ಥಿತರಿದ್ದರು. ಸಹಾಯ ಧನವಿತ್ತು ಸಹಕರಿಸಿದ ಸಮಸ್ತ ಸಹೃದಯಿ ದಾನಿಗಳಿಗೆ ಅನಂತಾನಂತ ಕೃತಜ್ಞತೆಗಳು.

More articles

Latest article