Wednesday, October 25, 2023

ಇಡ್ಕಿದು: ಹೈಮಾಸ್ಟ್ ದೀಪ ಉದ್ಘಾಟನೆ

Must read

ವಿಟ್ಲ: ಕುಳ ಗ್ರಾಮದ ಕುಂಡಡ್ಕ ವಿಷ್ಣುಮೂರ್ತಿ ದೇವಸ್ಥಾನದ ಬಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರ ಅಭಿವೃದ್ದಿ ಯೋಜನೆಯಡಿ ಅನುಷ್ಠಾನಗೊಂಡಿರುವ ಹೈಮಾಸ್ಟ್ ದೀಪವನ್ನು ಪುಣಚ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯರಾದ ಜಯಶ್ರೀ ಕೋಡಂದೂರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಪಂಚಾಯಿತಿ ಅಧ್ಯಕ್ಷರಾದ ಚಂದ್ರಾವತಿ, ಉಪಾಧ್ಯಕ್ಷರಾದ ಎಂ. ಸುಧೀರ್ ಕುಮಾರ್ ಶೆಟ್ಟಿ , ಪಿಡಿಒ ಗೋಕುಲ್‌ದಾಸ್ ಭಕ್ತ, ಪಂಚಾಯಿತಿ ಸದಸ್ಯರಾದ, ಚಿದಾನಂದ ಪೆಲತ್ತಿಂಜ, ಜಯರಾಮ ಕಾರ್‍ಯಾಡಿಗುತ್ತು, ಶಾರದಾ, ಕರ್ಗಲ್ಲು ನೂಜಿ ಮನೆತನದ ಕೆ.ಟಿ.ವೆಂಕಟೇಶ್ವರ ನೂಜಿ, ಮಾಜಿ ಪಂ.ಅಧ್ಯಕ್ಷರಾದ ಸುಂದರ ಗೌಡ ಪಾಂಡೇಲು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

More articles

Latest article