ಬಂಟ್ವಾಳ: ಬಿಸಿರೋಡಿನ ಪಾಣೆಮಂಗಳೂರು ಸೇತುವೆ ಸಮೀಪ ಇರುವ ಗುಡ್ಡೆಗೆ ಬೆಂಕಿ ಬಿದ್ದು ಕೆಲ ಹೊತ್ತು ಆತಂಕ ಉಂಟಾಯಿತು.
ಗುಡ್ಡದ ಲ್ಲಿರುವ ಸಾವಿರಾರು ರೂ ಕಾಡು ಮರಗಳು ಬೆಂಕಿಗೆ ಆಹುತಿಯಾಯಿತು.
ಅಕಸ್ಮಕವಾಗಿಯೋ ಅಥವಾ ಯಾರಾದರೂ ಗುಡ್ಡಕ್ಕೆ ಬೆಂಕಿ ಹಾಕಿದ್ದಾರೋ ಎಂಬುದು ಇನ್ನಷ್ಟೆ ತಿಳಿಯ ಬೇಕಾಗಿದೆ.
ಅಗ್ನಿಶಾಮಕ ದಳದ ವರು ಸ್ಥಳಕ್ಕೆ ಭೇಟಿ ನೀಡಿ ಬೆಂಕಿಯನ್ನು ನಂದಿಸಿದರು.
ಮಾಹಿತಿ ತಿಳಿದು ಬಂಟ್ವಾಳ ವ್ರತ್ತ ನಿರೀಕ್ಷಕ ಟಿ.ಡಿ.ನಾಗರಾಜ್, ನಗರ ಠಾಣಾ ಎಸ್. ಐ.ಚಂದ್ರಶೇಖರ್ ಮತ್ತು ಅಪರಾಧ ವಿಭಾಗದ ಎಸ್ .ಐ.ಹರೀಶ್ ಸ್ಥಳಕ್ಕೆ ಬೇಟಿ ನೀಡಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರು.