Friday, April 12, 2024

ಜಗತ್ತಿನಲ್ಲಿ ಭಾರತ ತಲೆ ಎತ್ತಿ ನಿಂತಿರುವುದೇ ಅಚ್ಚೇ ದಿನ್: ಪ್ರಹ್ಲಾದ್ ಜೋಶಿ

ಬಂಟ್ವಾಳ: ಪ್ರಧಾನಿ ನರೇಂದ್ರ ಮೋದಿ ಕನಸಿನ ಯೋಜನೆ ಉಜ್ವಲ ಅನಿಲ ಸಂಪರ್ಕ ವಿತರಣೆ ಮತ್ತು ಫಲಾನುಭವಿಗಳ ಸಮಾವೇಶ ದ.ಕ. ಜಿಲ್ಲೆಯ ಬಿ.ಸಿ.ರೋಡಿನ ಗೋಲ್ಡನ್ ಪಾರ್ಕ್‌ ಅಸೋಸಿಯೇಟ್ಸ್ ಮೈದಾನದಲ್ಲಿ ನಡೆಯಿತು. ಕಾರ್ಯಕ್ರಮವನ್ನ  ಪೆಟ್ರೋಲಿಯಂ ಮತ್ತು ನೈಸರ್ಗಿಕ ಸಮಿತಿಯ ಮುಖ್ಯಸ್ಥ, ಸಂಸದ ಪ್ರಹ್ಲಾದ್ ಜೋಷಿ  ಬಂಟ್ವಾಳದಲ್ಲಿ ಪ್ರಧಾ‌ನಮಂತ್ರಿ ಉಜ್ವಲ ಯೋಜನೆ ಉದ್ಘಾಟಿಸಿ  ಮಾತನಾಡಿದ ಅವರು  1974ರಲ್ಲಿ ಗ್ಯಾಸ್ ಸಂಪರ್ಕಕ್ಕೆ ನನ್ನ ತಂದೆ ಅರ್ಜಿ ಹಾಕಿದ್ದರು.
ಆದ್ರೆ ನಮ್ಮ ಮನೆಗೆ ಗ್ಯಾಸ್ ಬಂದಿದ್ದು 1989ರಲ್ಲಿ ಕಾಂಗ್ರೆಸ್ ನವರು ಪಂಪ್ ಹೊಡೆದಿದ್ದು ಬಿಟ್ಟರೆ ಗ್ಯಾಸ್ ಸಿಗಲಿಲ್ಲ. ಅಚ್ಚೇ ದಿನ್ ಅನ್ನೋದು ಕಾಂಗ್ರೆಸ್ ಗೆ ಬರಲ್ಲ,
ಅದು ನಮ್ಮ ದೇಶದ ಜನರಿಗೆ ಬರಬೇಕು ಅನ್ನೋದು ಮೋದಿ ಆಶಯ. ಕಾಂಗ್ರೆಸ್ ಅವಧಿಯಲ್ಲಿ ದೇಶದ ಜನರಿಗೆ ಗ್ಯಾಸ್ ಕೊಡಲು ಆಗಲಿಲ್ಲ, ಸರಿಯಾದ ರಸ್ತೆ ಆಗಲಿಲ್ಲ
ವಾಜಪೇಯಿ ಕಾಲದಲ್ಲಿ ಈ ದೇಶದ ರಸ್ತೆಗಳು ಅಭಿವೃದ್ಧಿಯಾದವು. ಮೊಗಲರು, ಬ್ರಿಟಿಷರಿಗಿಂತ ಅತೀ ಹೆಚ್ಚು ಲೂಟಿ ಮಾಡಿದವರು ಕಾಂಗ್ರೆಸ್ಸಿಗರು ಜಗತ್ತಿನಲ್ಲಿ ಭಾರತ ತಲೆಎತ್ತಿ ನಿಂತಿರೋದೇ ಅಚ್ಚೇ ದಿನ್   ರಾಹುಲ್ ಗಾಂಧಿಗೆ ಯಾರೋ ಭಾಷಣ ಬರೆದು ಕೊಡ್ತಾರೆ, ಅವ್ರು ಓದ್ತಾರೆ , ಅದರ ಪುಟಗಳು ಚೆಲ್ಲಾಪಿಲ್ಲಿಯಾದ್ರೆ ರಾಹುಲ್ ಗಾಂಧಿಗೆ ಫಜೀತಿಯಾಗುತ್ತೆ  ಗಾಂಧಿ ಕಂಪೆನಿಯವರ ಸಮಸ್ಯೆ ಏನಂದ್ರೆ ಅವರ ಡಿಎನ್ ಎ ಪ್ರಾಬ್ಲಂ ಇದೆ. ಇವರು ಅಸಲಿ ಗಾಂಧಿ ಅಲ್ಲ, ನಕಲಿ ಗಾಂಧಿಗಳು
ವಿದೇಶಿ ನೆಲದಲ್ಲಿ ಇವಿಎಂ ಬಗ್ಗೆ ಆರೋಪ ಮಾಡೋ ದುಷ್ಟ ಕೆಲಸವನ್ನು ಕಾಂಗ್ರೆಸ್ ಮಾಡ್ತಿದೆ. ನಿನ್ನೆ ಮೊನ್ನೆಯಿಂದ ಪ್ರಿಯಾಂಕ ಗಾಂಧಿ ಅಂತ ಹೇಳ್ತಿದಾರೆ
ಈಕೆಯ ಗಂಡ 50 ಲಕ್ಷದಲ್ಲಿದ್ದವ ಈಗ 3 ಲಕ್ಷ ಕೋಟಿಯಲ್ಲಿದ್ದಾನೆ
ಪ್ರಿಯಾಂಕ ಗಂಡ ರಾಬರ್ಟ್ ವಾದ್ರಾ ಹರಿಯಾಣದ ಸರ್ಕಾರಿ ಭೂಮಿಯನ್ನು ಒಂದು ಲೂಟಿ ಹೊಡೆದಿದ್ದಾನೆ
ಜಗತ್ತಿನ ಅತೀ ದೊಡ್ಡ ಲೂಟಿಕೋರ ಪ್ರಿಯಾಂಕ ಗಂಡ ರಾಬರ್ಟ್ ವಾದ್ರಾ ಎಂದು ಅವರು ವಾಗ್ದಾಳಿ ನಡೆಸಿದರು.

 

ಬಳಿಕ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ  ಫಲಾನುಭವಿಗಳಿಗೆ ಎಲ್ಪಿಜಿ ಸಂಪರ್ಕವನ್ನ ಹಸ್ತಾಂತರಿಸುವ ಮೂಲಕ ಯೋಜನೆಗೆ ಚಾಲನೆ‌ಯನ್ನ ನೀಡಿದ್ರು. ಇದೇ ವೇಳೆ ಮಾತನಾಡಿದ ಅವ್ರು, ಕೇಂದ್ರ ಸರ್ಕಾರದ ಉಜ್ವಲ ಅನಿಲ‌ ಸಂಪರ್ಕ ಯೋಜನೆ ಪ್ರಧಾನಿ‌ ನರೇಂದ್ರ ಮೋದಿಯವರ ಒಂದು ಕನಸಾಗಿತ್ತು..ಹೀಗಾಗಿ ಅಡುಗೆ ಮನೆಗಳನ್ನ ಹೊಗೆ ಮತ್ತು ಮಾಲಿನ್ಯ ಮುಕ್ತಗೊಳಿಸುವ ಯೋಚನೆಯಿಂದ ದೇಶಾದ್ಯಂತ ಈ ಯೋಜನೆಯನ್ನ ಪ್ರಾರಂಭಿಸಿದ್ದೇವೆ. ಮುಂದಿನ‌ ದಿನಗಳಲ್ಲಿ ದೇಶಾದ್ಯಂತ ಎಲ್ಲಾ ಜನರಿಗೆ ತಲುಪಿಸುವ ಕಾರ್ಯ ಆಗತ್ತೆ ಅಂತ ಹೇಳಿದ್ರು..
 ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಸಂಸದ, ಪೆಟ್ರೋಲಿಯಂ ಸಮಿತಿ ಅಧ್ಯಕ್ಷ ಪ್ರಹ್ಲಾದ ಜೋಷಿ, ಶಾಸಕರಾದ ಕೋಟ ಶ್ರೀನಿವಾಸ ಪೂಜಾರಿ,  ವೇದವ್ಯಾಸ ಕಾಮತ್, ಉಮಾನಾಥ್ ಕೋಟ್ಯಾನ್, ಡಾ. ಭರತ್ ಶೆಟ್ಟಿ, ಹರೀಶ್ ಪೂಂಜಾ, ಅಂಗಾರ,  ಸಂಜೀವ ಮಠಂದೂರು, ಸಿ‌.ಟಿ.ರವಿ, ಜಿಪಂ ಅಧ್ಯಕ್ಷ ಮೀನಾಕ್ಷಿ ಶಾಂತಿಗೂಡು, ತೈಲ ಸಂಸ್ಥೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಪ್ರಸ್ತಾವಿಸಿದರು.
ಭಾರತ್ ಪೆಟ್ರೋಲಿಯಂನ ತಂಗವೇಲು ಸ್ವಾಗತಿಸಿದರು. ಮನೋಹರ ಪ್ರಸಾದ್ ನಿರೂಪಿಸಿದರು. ತೈಲ ಸಂಸ್ಥೆಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಉಜ್ವಲ ಯೋಜನೆಯ ಫಲಾನುಭವಿಗಳು ಹಾಜರಿದ್ದರು.

More from the blog

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ವಾರ್ಷಿಕ ಜಾತ್ರೆ..ಮಹಾರಥೋತ್ಸವ ಕಣ್ಣುಂಬಿಕೊಂಡ ಸಾವಿರಾರು ಭಕ್ತರು

ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆಯಲ್ಲಿ ಎ. ೧೧ರಂದು ಸಂಜೆ ರಥೋತ್ಸವ ನಡೆಯಿತು. ಜಾತ್ರೆಯಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ಮಹಾಪೂಜೆಯ ಬಳಿಕ ದೇವರು ರಥಾರೋಹಣಗೊಂಡು ಸಾಂಕೇತಿಕವಾಗಿ ರಥವನ್ನು ಎಳೆಯಲಾಯಿತು. ಮಧ್ಯಾಹ್ನ ರಥಕ್ಕೆ...

ಬಂಟ್ವಾಳದ ಬಡಗಕಜೆಕಾರು, ತೆಂಕಕಜೆಕಾರು ಗ್ರಾಮದಲ್ಲಿ ಮತದಾರರ ಮನೆಗೆ ಭೇಟಿ ನೀಡಿ ಮತಯಾಚನೆ ನಡೆಸಿದ ಶಾಸಕ ರಾಜೇಶ್ ನಾಯ್ಕ್

ಲೋಕ ಸಭಾ ಚುನಾವಣೆಯ ಹಿನ್ನಲೆಯಲ್ಲಿ ಕ್ಯಾ.ಬ್ರಿಜೇಶ್ ಚೌಟ ಅವರ ಗೆಲುವಿಗಾಗಿ "ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಗ್ರಾಮ,ಮನೆ,ಮನ ಸಂಪರ್ಕ ಅಭಿಯಾನ"ದ ಅಂಗವಾಗಿ ಬಂಟ್ವಾಳದ ಬಡಗಕಜೆಕಾರು, ತೆಂಕಕಜೆಕಾರು ಗ್ರಾಮದಲ್ಲಿ ಮತದಾರರ ಮನೆಗೆ...

ಲೋಕಸಭಾ ಚುನಾವಣೆಯ ಹಿನ್ನೆಲೆ : ಚಾರ್ಮಾಡಿಯ ಮೂವರು ಗಡಿಪಾರು

ಬೆಳ್ತಂಗಡಿ: ಚುನಾವಣ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಹಾಗೂ ಕೋಮು ಗಲಭೆಗಳಲ್ಲಿ ಭಾಗವಹಿಸುವ ಸಾಧ್ಯತೆ ಇರುವ ಕಾರಣ ಮೂವರು ರೌಡಿಶೀಟರ್‌ಗಳನ್ನು ಧರ್ಮಸ್ಥಳ ಪೊಲೀಸರು ಗಡಿಪಾರು ಮಾಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ನಿವಾಸಿಗಳಾದ...

ಹಿತೈಷಿ ತರಬೇತಿ ಕೇಂದ್ರದ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಫಲಿತಾಂಶದೊಂದಿಗೆ ತೇರ್ಗಡೆ

2023-24ನೇ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಪಾಣೆಮಂಗಳೂರು, ನರಿಕೊಂಬುವಿನಲ್ಲಿರುವ ಹಿತೈಷಿ ತರಬೇತಿ ಕೇಂದ್ರದ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ. ಕು.ಕೀರ್ತನ ಶೇ.95.6% ಅಂಕಗಳೊಂದಿಗೆ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ ಎಂದು ಸಂಸ್ಥೆಯ ಪ್ರಕಟನೆಯಲ್ಲಿ ತಿಳಿಸಲಾಗಿದೆ. 2024-25ನೇ...