Wednesday, October 18, 2023

ಸ್ವಾತಂತ್ರ್ಯ ದಿನಾಚರಣೆ

Must read

ಆಗಸ್ಟ್ 15 ಅಂದ ಕೂಡಲೇ ನೆನಪಾಗುವುದು ನಮಗೆ ಸ್ವಾತಂತ್ರ್ಯ ದಿನಾಚರಣೆ,   ಆದರೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ನೆನಪಾಗುವುದಿಲ್ಲ ನಮಗೆ ಯಾಕೆ ?   ಅಂದು ನಮ್ಮ ಹಿರಿಯರು ಬ್ರಿಟಿಷರ ಮುಂದೆ  ಗುಲಾಮರಂತೆ ಬದುಕುತ್ತಿದ್ದರೂ.   ಇಂದು ನಾವು ನಮ್ಮವರಿಗಾಗಿ ಗುಲಾಮರಂತೆ ಬದುಕುವುದು ಯಾಕೆ ?   ಸ್ವಾತಂತ್ರ್ಯದ  ದಿವಸಕ್ಕೆ ಬೇಕಾಗಿ   ಅದೆಷ್ಟೊ ಬಿಸಿ ರಕ್ತದ ಯುವಕರ ಬಲಿದಾನ ನಡೆಯಿತು.   ಆದರೆ ಆ ಬಿಸಿ ರಕ್ತದ ಯುವಕರ ದೇಶಾಭಿಮಾನ ನೆನಪಾಗುವುದಿಲ್ಲ ನಮಗೆ ಯಾಕೆ ?   ಅಂದು ಹೋರಾಡಿದರೂ ಕಿತ್ತೂರು ರಾಣಿ ಚೆನ್ನಮ್ಮ ರಂನತಹ ಹಲವಾರು ವೀರ ವನಿತೆಯರು.   ಆದರೆ ಇಂದು ನಮ್ಮ ಕೆಲವು ವನಿತೆಯರಿಗೆ ನೆನಪಾಗುವುದಿಲ್ಲ ಯಾಕೆ ?   ಅಂದು ಸ್ವಾತಂತ್ರ್ಯಕ್ಕೆ ಬೇಕಾಗಿ ಮೊಲಗಿತ್ತು  ವಂದೇ ಮಾತರಂ ಎಂಬ ಉದ್ಘೋಷ   ಆದರೆ ಇಂದು ನಮಗೆ ವಂದೇ ಮಾತರಂ ಎಂಬ ಮಂತ್ರ ನೆನಪಾಗುವುದಿಲ್ಲ ಯಾಕೆ ?   ಅಂದು ಕಂಡರೂ ಗಾಂಧೀಜಿ ರಾಮರಾಜ್ಯದ ಕನಸು.   ಆದರೆ ಇಂದು ನಮಗೆ ಗಾಂಧೀಜಿಯ ಕನಸು ನನಸಾಗಲಿಲ್ಲ. ನೆನಪಾಗಲಿಲ್ಲ ಯಾಕೆ ?    

✍ ಗಿರೀಶ್ ತುಳಸೀವನ

More articles

Latest article