Saturday, February 8, 2025

ಮಾಡರ್ನ್ ಕವನ-ನಾನು ಸಾಯ್ಲಿಲ್ಲ

ಯಾರೇ ಬಂದು ಹೋದರು
ಏನೇ ಅಂದರು
ಏ‌ನೇ ಆದರು
ನಾನು ಸಾಯ್ಲಿಲ್ಲ.

ಹಿಂಸೆ ಮಹಾ ಪಾಪ
ಆಸೆಯೇ ದುಃಖಕ್ಕೆ ಮೂಲ
ಎಂದು ಬುದ್ದ ಅಂದರು
ನಾನು ಹೌದೌದು ಅಂದಿದ್ದೆ
ಆದರೂ ನಾನು ಸಾಯಲ್ಲಿಲ್ಲ…!?


ಎಲ್ಲ ಬಿಟ್ಟು ದಿಗಂಬರನಾಗಿ ನಿಂತ
ಬಾಹುಬಲಿ ಯನ್ನು ನಾ ಕಂಡಿದ್ದೇನೆ
ಅವೆನೆತ್ತರವ ಅಳೆದಿದ್ದೇನೆ
ಅವನ ಕಥೆ ಓದಿದ್ದೇನೆ.
ಆದರೂ ನಾನು ಸಾಯಲಿಲ್ಲ..!?

ಅಲೆಗ್ಸಾಂಡರ್ ಪರಾಕ್ರಮ
ಜಗ ಗೆಲ್ಲುವ ಬಯಕೆ
ಕೊನೆಗೆ ಬರಿಗೈಯ್ಯಲ್ಲಿ
ಇಹಲೋಕ ಯಾತ್ರೆ ಮಾಡಿದ್ದು
ಎಲ್ಲಾ ಗೊತ್ತಿದೆ
ಆದರೂ ‌ನಾನು ಸಾಯಲಿಲ್ಲ..!?

ಕೋಟೆ ಕಟ್ಟಿ ಮೆರೆದವರೆಲ್ಲ
ಮಣ್ಣಾದರು
ಎನ್ನುವ ಹಾಡ ಮತ್ತೆ ಮತ್ತೆ ಕೇಳಿಸಿಕೊಂಡಿದ್ದೇನೆ
ಆದರೂ ನಾನು ಸಾಯಲಿಲ್ಲ…!?

ಹೌದು ನಾನು ಸಾಯಲಿಲ್ಲ
ನನ್ನೊಳಗಿರುವ ನಾನು ಸಾಯಲಿಲ್ಲ
ನನ್ನದು ನನ್ನದು ಅನ್ನುವುದ ಬಿಡಲಿಲ್ಲ..

ನಾನು ಸಾಯಲಿಲ್ಲ
ಸಾಯುವುದೂ ಇಲ್ಲ…!

✍ಯತೀಶ್ ಕಾಮಾಜೆ

More from the blog

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಮಂಗಳೂರು: 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ದುಬಾೖಯಿಂದ ಜ.17ರಂದು ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್‌ ರೋಗ ಲಕ್ಷಣಗಳು...

ಬೋಗೋಡಿ ಸಲ್-ಸಬೀಲ್ ಸಂಸ್ಥೆಯ 11ನೇ ವಾರ್ಷಿಕ ಮಹಾಸಭೆ : ಅಧ್ಯಕ್ಷರಾಗಿ ಜಮಾಲ್ ಬಂಗ್ಲೆಗುಡ್ಡೆ ಆಯ್ಕೆ

ಪಾಣೆಮಂಗಳೂರು : ಸಲ್-ಸಬೀಲ್ ಸ್ಟೂಡೆಂಟ್ಸ್ ಎಸೋಸಿಯೇಶನ್ ಬೋಗೋಡಿ ಇದರ 11ನೇ ವಾರ್ಷಿಕ ಮಹಾಸಭೆ ಇತ್ತೀಚೆಗೆ ಝೋಮ್ ಮೀಟಿಂಗ್‌ನಲ್ಲಿ ನಡೆಯಿತು. ಸಂಸ್ಥೆಯ ಅಧ್ಯಕ್ಷರಾಗಿ ಜಮಾಲ್ ಬಂಗ್ಲಗುಡ್ಡೆ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ರಿಲ್ವಾನ್ ಮೆಲ್ಕಾರ್ ಅವಿರೋಧವಾಗಿ...

ದಿವ್ಯಾಂಗತೆಯ ಕುರಿತು ಜಾಗೃತಿ ಕಾರ್ಯಕ್ರಮ

ಬಂಟ್ವಾಳ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಿ‌ಮೂಡ, ಅಜ್ಜಿಬೆಟ್ಟು, ಬಿ ಸಿ ರೋಡ್, ಬಂಟ್ವಾಳ ತಾಲೂಕು ಇಲ್ಲಿ ದಿವ್ಯಾಂಗತೆಯ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮವು ಜ.22ರಂದು ಜರಗಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ವಿಕಾಸಂ...