Tuesday, July 1, 2025

ಪ್ರೀತಿಯ ದರ್ಬಾರು

ನಡೆದಿದೆ ನೋಡಿ ಅಂದಿಗೂ ಇಂದಿಗೂ
ದೇವಬೀದಿಯಲ್ಲಿ ರಾಜರಥದ ತೇರು
ವರ್ಷದಿಂದ ವರ್ಷಕ್ಕೆ ದರ್ಬಾರಿನ ಜೋರು
ಅದ್ದೂರಿ ಜೋಡಿ ಪ್ರೀತಿಯ ಕಾರುಬಾರು

ದಿನ ಕಳೆದಂತೆ ಕರಗುವುದು ಬಹುತೇಕ
ಪರಸ್ಪರ ಸಹಕಾರ ಬೆಂಗಾವಲು ಆಕರ್ಷಕ
ಪ್ರತಿ ನಿತ್ಯ ಹೆಚ್ಚುವುದು ಒಲವ ದ್ಯೋತಕ
ಎಂದು ಮುಗಿಯದ ಅಮೃತಬಳ್ಳಿ ಪ್ರೇಮ

ಎಲ್ಲರಲ್ಲಿಯೂ ಇದ್ದೀತು ವಯಸ್ಸಿನಲ್ಲಿ
ಆರಂಭದಲ್ಲಿ ಇದ್ದ ಆ ಪ್ರೀತಿಯ ಸೆಳೆತ
ಕಳೆದರೂ ಎಷ್ಟೋ ವರ್ಷ ಹಾಗೆ ಇದೆ
ಸೆಳೆದು ಅಪ್ಪುವ ಹೃದಯ ಬಡಿತ ಮಿಡಿತ

ಮಕ್ಕಳು ಇದ್ದರೆ ಮೊಮ್ಮಕ್ಕಳು ಆದರೇನು
ಸರಸ ಸಲ್ಲಾಪದಿ ಇನ್ನೂ ಹೊಸ ತುಡಿತ
ಈಗಲೂ ಅದೇ ನಾಚಿಕೆ ಘಮ ಅವಳಲ್ಲಿ
ಕಾಲ್ಬೆರಳ ತುದಿ ಉಲಿಯುವ ರಂಗೋಲಿ

ಬಂದು ಹೋದವು ಏನೆಲ್ಲಾ ಲೆಕ್ಕವಿಲ್ಲದಷ್ಟು
ಹುಸಿಮುನಿಸು ಬಿಸಿ ಕೋಪ ತಾಪಗಳು
ಕ್ಷಣಿಕ ಇದ್ದದ್ದೇ ಅವೆಲ್ಲಾ ಯಾವುದರಷ್ಟು
ಗಟ್ಟಿ ಆಗಿರುವ ಅನುಬಂಧ ಅವಿನಾಭಾವ

ಬಸವರಾಜ ಕಾಸೆ

More from the blog

B.C. Road : ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪಥಸಂಚಲನ..

ಬಂಟ್ವಾಳ: ಕಾನೂನು ಸುವ್ಯವಸ್ಥೆಯನ್ನು ಭದ್ರಗೊಳಿಸುವ ನಿಟ್ಟಿನಲ್ಲಿ ಬಂಟ್ವಾಳಕ್ಕೆ ಆಗಮಿಸಿದ್ದ ವಿಶೇಷ ಕಾರ್ಯಪಡೆಯಿಂದ ಕೈಕಂಬದ ಶಾಂತಿ ಅಂಗಡಿಯಿಂದ ಬಿಸಿರೋಡುವರೆಗೆ ಪಥಸಂಚಲನ ನಡೆಯಿತು. ವಿಶೇಷ ಕಾರ್ಯಪಡೆ ಜೊತೆ ಬಂಟ್ವಾಳ ನಗರ ಪೋಲೀಸ್ ಠಾಣಾ ಪೋಲೀಸ್ ಇನ್ಸ್ ಪೆಕ್ಟರ್...

ಅಡಿಕೆ ವ್ಯಾಪಾರಿಯಿಂದ ವಂಚನೆ ಪ್ರಕರಣ : ರೈತರಿಂದ ಹೋರಾಟದ ಎಚ್ಚರಿಕೆ..

ಬಂಟ್ವಾಳ: ಅಡಿಕೆ ವ್ಯಾಪಾರಿಯೋರ್ವ ಕೃಷಿಕರಿಗೆ ಕೋಟ್ಯಾಂತರ ‌ರೂಪಾಯಿ ವಂಚಿಸಿ ಪರಾರಿಯಾದ ಘಟನೆಗೆ ಸಂಬಂಧಿಸಿದಂತೆ ಅಶೋಕ್ ಶೆಟ್ಟಿ ಸರಪಾಡಿ ನೇತೃತ್ವದಲ್ಲಿ ರೈತರು ತಹಶೀಲ್ದಾರ್, ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಲು ಮುಂದಾಗಿದ್ದಾರೆ. ರಂಗೋಲಿಯಲ್ಲಿ ನಡೆದ...

ಕರಾವಳಿ, ಮಲೆನಾಡಿನಲ್ಲಿ ಜು. 3ರಿಂದ ಮಳೆ ಮತ್ತಷ್ಟು ಬಿರುಸು : ಯೆಲ್ಲೋ ಅಲರ್ಟ್ ಘೋಷಣೆ..

ಮಂಗಳೂರು : ರಾಜ್ಯದ ಕೆಲವು ಕಡೆಗಳಲ್ಲಿ ವರುಣನ ಆರ್ಭಟ ಕಡಿಮೆಯಾಗಿದೆ. ಆದರೆ ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಜುಲೈ 3 ರಿಂದ ಮಳೆ ಬಿರುಸುಗೊಳ್ಳುವ ಸಾಧ್ಯತೆ ಇದೆ ಎಂದು...

ರಕ್ತದ ಕಾನ್ಸರ್‌ಗೆ ತುತ್ತಾದ ಮಗುವಿಗೆ ಯುವವಾಹಿನಿ ಬಂಟ್ವಾಳ ಆಸರೆ..

ಬಂಟ್ವಾಳ : ರಕ್ತದ ಕಾನ್ಸರ್ ಖಾಯಿಲೆಯಿಂದ ಬಳಲುತ್ತಿರುವ ಬಂಟ್ವಾಳ ತಾಲೂಕಿನ ಕರ್ಪೆ ಗ್ರಾಮದ ಕುಟ್ಟಿಕಳ ನಿವಾಸಿಯಾದ ಹಿರಣ್ಯಾಕ್ಷ ಸೌಮ್ಯ ದಂಪತಿಗಳ ಮಗಳಾದ ಮನಶ್ವಿ (5 ವರ್ಷ) ಮಗುವಿನ ಹೆಚ್ಚಿನ ಚಿಕಿತ್ಸೆಗಾಗಿ ಯುವವಾಹಿನಿ ಬಂಟ್ವಾಳ...