Thursday, February 13, 2025

ಪೆರಾಜೆ ವಿಷ್ಣುಮೂರ್ತಿ ದೇವಸ್ಥಾನ ದ ಜೀರ್ಣೋದ್ಧಾರ : ಪೂರ್ವಭಾವಿ ಸಭೆ

ಬಂಟ್ವಾಳ: ಪುರಾತನ ಪ್ರಸಿದ್ಧ *ಪೆರಾಜೆ ವಿಷ್ಣುಮೂರ್ತಿ ದೇವಸ್ಥಾನ* ದ ಜೀರ್ಣೋದ್ಧಾರ ದ ಬಗ್ಗೆ ಪೂರ್ವಭಾವಿ ಸಭೆ ದೇವಸ್ಥಾನದ ವಠಾರದಲ್ಲಿ ನಡೆಯಿತು.. ಈ ದೇವಾಲಯ ವು ಸುಮಾರು ಐದುನೂರು ವರ್ಷಗಳ ಹಿಂದಿನದ್ದಾಗಿದ್ದು ಕೆಲವು ವರ್ಷಗಳ ಹಿಂದೆ ದೇವರ ಗರ್ಭಗುಡಿ, ತೀರ್ಥಮಂಟಪವು ಊರ, ಪರವೂರ ಭಗವಧ್ಬಕ್ತರ ನೆರವು, ಶ್ರಮದೊಂದಿಗೆ ಪುನರುಜ್ಜೀವನಗೊಂಡು ಬ್ರಹ್ಮಕಲಶ ನೇರೆವೇರಿದ್ದು ಪ್ರಸ್ತುತ ದೇವಾಲಯ ದ *ಸುತ್ತುಗೋಪುರ, ಬೋಜನಾಲಯ, ಅರ್ಚಕರ ಮನೆ* ಆಗಬೇಕಿದ್ದು ಈ ನಿಟ್ಟಿನಲ್ಲಿ ಪೆರಾಜೆ ಗ್ರಾಮಸ್ಥರ ಸಲಹೆ ಸೂಚನೆಗಳನ್ನು, ಸಹಕಾರಗಳನ್ನು ಪಡೆಯಲು ಡಿ 02 ರ ಆದಿತ್ಯವಾರ ದೇವಾಲಯ ದ ವಠಾರದಲ್ಲಿ ಸಭೆ ನಡೆಯಿತು .ಈ ಸಭೆಯಲ್ಲಿ ವಿಷ್ಣುಮೂರ್ತಿ ದೇವಸ್ಥಾನ ದ ಆಡಳಿತ ಸಮಿತಿಯ ಆಧ್ಯಕ್ಷರಾದ ಶ್ರೀ ಅಪ್ರಾಯ ಪೈ ಕೋಶಾಧಿಕಾರಿಡಾ.ಶ್ರೀನಾಥ್ ಆಳ್ವಉಪಾಧ್ಯಕ್ಷರುಶ್ರೀ ಕುಶಾಲ ಯಂ.ಪೆರಾಜೆಕಾರ್ಯದರ್ಶಿ ಶ್ರೀ ಜನಾರ್ದನ ಪೆರಾಜೆ, ವ್ಯವಸ್ಥಾಪನ ಸದಸ್ಯರಾದ ಸುಂದರ ಬಂಗೇರ, ರಾಮಣ್ಣ ಗೌಡ, ಚಂದ್ರಹಾಸ ಶೆಟ್ಟಿ ಹಿರಿಯರಾದ ಮೋಹನದಾಸ್ ಹೆಗ್ಡೆ , ಬಿ.ಟಿ.ನಾರಾಯಣ ಭಟ್, ಶ್ರೀಕಾಂತ್ ಆಳ್ವ ಪೆರಾಜೆ ಗುತ್ತು, ಜಯರಾಮ ರೈ ಪಂಚಾಯತ್ ಅದ್ಯಕ್ಷ ರಾದ ಪುಷ್ಪ , ಪಂಚಾಯತ್ ಸದಸ್ಯರಾದ ತಿಮ್ಮಪ್ಪ ಗೌಡ,ಉಮೇಶ್ ಎಸ್. ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು.

More from the blog

ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರಕ್ಕೆ ಶಾಸಕ ರಾಜೇಶ್ ನಾಯ್ಕ್ ಬೆಂಬಲ

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಗ್ರಾಮ ಆಡಳಿತ ಅಧಿಕಾರಿಗಳು ಸತತ ಮೂರನೇ ದಿನ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ. ಬಂಟ್ವಾಳ ತಾಲೂಕು ಆಡಳಿತ ಸೌಧದ ಮುಂಭಾಗ ಮುಷ್ಕರದ ಸ್ಥಳಕ್ಕೆ ಭೇಟಿ ನೀಡಿದ...

ಫೆ.15 ರಂದು ಕಮಲಾಶ್ರಯ ಮನೆಯ ಹಸ್ತಾಂತರ ಹಾಗೂ ಗೃಹಪ್ರವೇಶ

ಬಂಟ್ವಾಳ: ಬಿಜೆಪಿ ಮಹಾಶಕ್ತಿ ಕೇಂದ್ರ ಮಾಣಿ ಮತ್ತು ಬಿಜೆಪಿ ಶಕ್ತಿ ಕೇಂದ್ರ ಅನಂತಾಡಿ ಇದರ ಸಹಕಾರದಿಂದ ಅನಂತಾಡಿ ಗ್ರಾಮದ ಬಾಬನಕಟ್ಟೆ ಎಂಬಲ್ಲಿ ಬಲ್ಲು ಕೊರಗ ಇವರ ಕುಟುಂಬಕ್ಕೆ ನಿರ್ಮಿಸಲಾದ ನೂತನ ಮನೆಯನ್ನು ಫೆ.15...

ಬೇಲಿ ವಿವಾದ : ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ತಾ.ಪಂ.ಅಧಿಕಾರಿ ವರ್ಗ ಕಚೇರಿ ಮುಂಭಾಗದ ಜಾಗಕ್ಕೆ ಕಬ್ಬಿಣದ ರಾಡ್ ಅಳವಡಿಸಿ ಬೇಲಿ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಾ.ಪಂ.ಗೆ ಹಠಾತ್...

ವಿಟ್ಲ ಪಿಎಂ ಶ್ರೀ ಸರಕಾರಿ ಪ್ರೌಢ ಶಾಲೆಯಲ್ಲಿ ಮೆಟ್ರಿಕ್ ಮೇಳ

ವಿಟ್ಲ: ವಿಟ್ಲ ಪಿ ಎಂ ಶ್ರೀ ಸರಕಾರಿ ಪ್ರೌಢ ಶಾಲೆ (ಆರ್ ಎಂ ಎಸ್ ಎಂ)ವಿಟ್ಲ ಇದರ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬುಧವಾರ ಮೆಟ್ರಿಕ್ ಮೇಳ ಕಾರ್ಯಕ್ರಮ ನಡೆಯಿತು. ಮೆಟ್ರಿಕ್ ಮೇಳವನ್ನು ವಿಟ್ಲ ಪಟ್ಟಣ...