ಬಂಟ್ವಾಳ: ಪೆರಾಜೆ ಗ್ರಾಮ ದ ಅಶ್ವತ್ಥಡಿ ಎಂಬಲ್ಲಿ ಯುವ ವೇದಿಕೆ ನೇತೃತ್ವದಲ್ಲಿ ನೂತನವಾಗಿ ನಿರ್ಮಿಸಲಾದ ಬಸ್ ನಿಲ್ದಾಣದ ಉದ್ಘಾಟನೆ ಮತ್ತು ಲೋಕಾರ್ಪಣೆ ಕಾರ್ಯಕ್ರಮ ಇಂದು ಡಿ. 02 ರಂದು ನಡೆಯಿತು. ಬಸ್ ನಿಲ್ದಾಣದ ಉದ್ಘಾಟನೆ ಯನ್ನು ಸ್ಥಳೀಯ ಹಿರಿಯರಾದ ಸುರೇಂದ್ರ ಮತ್ತು ವಿಶ್ವನಾಥ್ ಅವರು ನೆರವೇರಿಸಿದರು. ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಾದ ವಜ್ರನಾಥ ಕಲ್ಲಡ್ಕ, ಬಿಜೆಪಿ ಎಸ್.ಟಿ ಮೋರ್ಚಾ ಜಿಲ್ಲಾ ಅಧ್ಯಕ್ಷ ರಾದ ದಿನೇಶ್ ಅಮ್ಟೂರು, ಭಜರಂಗದಳದ ವಿಟ್ಲ ತಾಲೂಕು ಸಂಚಾಲಕ ರಾದ ಅಕ್ಷಯ್ ಕಲ್ಲಡ್ಕ. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾ, ಸದಸ್ಯರಾದ ಉಮೇಶ್ ಎಸ್.ಪಿ.ಉದ್ಯಮಿ ಪುಷ್ಪರಾಜ್ ಚೌಟ, ಯುವ ವೇದಿಕೆ ಸಂಚಾಲಕ ರಾಜಾರಾಂ ಕಡೂರು. ಅಧ್ಯಕ್ಷ ಅಜಿತ್ ಬುಡೋಳಿ, ಕಾರ್ಯದರ್ಶಿ ಯತಿರಾಜ್ ಪೆರಾಜೆ, ಮತ್ತು ಸದಸ್ಯರು, ಊರಿನ ಹಿರಿಯರು ಉಪಸ್ಥಿತರಿದ್ದರು

