Friday, February 7, 2025

ಗಾಣೆಮಾರ್ ಅಂಗನವಾಡಿಯಲ್ಲಿ ಗ್ರಾಮೀಣ ಮಟ್ಟದ ಚಿಣ್ಣರಪ್ರತಿಭೋತ್ಸವ

ಪೊಳಲಿ: ಜಿಲ್ಲೆಯಲ್ಲೇ ಇದೊಂದು ಅತಿ ಸುಂದರ ಹಾಗೂ ಸುಸಜ್ಜಿತ ಅಂಗನವಾಡಿ. ಅಂಗನವಾಡಿಯಲ್ಲಿ ಮಕ್ಕಳ ವಿದ್ಯೆಗೆ ಪೂರಕ ಚಟುವಟಿಕೆಯೊಂದಿಗೆ ದೇಶ ಕಟ್ಟುವ ಕೆಲಸವಾಗುತ್ತಿದೆ. ಎಲ್‌ಕೇಜಿ, ಯೂಕೇಜಿಯಿಂದ ಗುಣಮಟ್ಟದ ಸಂಸ್ಕಾರ ಮಕ್ಕಳಿಗೆ ಸಿಗುತ್ತಿಲ್ಲ. ಕನ್ನಡ ಮಾಧ್ಯದಲ್ಲಿ ಅಥವಾ ಅಂಗನವಾಡಿಯಲ್ಲಿ ಈ ಗುಣ ಬೆಳೆಸಿಕೊಳ್ಳುವ ಮಕ್ಕಳು ಕೊನೆತನಕ ಪಾಲಕರಿಗೆ ಆಸರೆಯಾಗುತ್ತಾರೆ ಎಂದು ನರೇಗಾದ ಮಾಜಿ ಒಂಬುಡ್ಸ್‌ಮನ್ ಹಾಗೂ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ನುಡಿದರು.

ಬಡಕಬೈಲಿನ ಗಾಣೆಮಾರಿನ ಬಾಲ ವಿಕಾಸ ಸಮಿತಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಗ್ರಾಮೀಣ ಮಟ್ಟದ ಚಿಣ್ಣರ ಪ್ರತಿಭೋತ್ಸವ-೨೦೧೮ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ಈ ಅಂಗನವಾಡಿ ಕೇಂದ್ರಕ್ಕೆ ಇಂಗ್ಲಿಷ್, ಕನ್ನಡ, ತುಳು ಕಲಿಯಬಹುದಾದ ಐಪ್ಯಾಡ್ ಕಲಿಸಬೇಕು. ಸ್ವಚ್ಚತೆಗೆ ಆದ್ಯತೆ ನೀಡುವುದಕ್ಕಾಗಿ ಪ್ರತಿ ಮನೆಯಲ್ಲೂ ಶೌಚಾಲಯ ಇರಬೇಕು. ಕಸ ಎಲ್ಲೆಂದರಲ್ಲಿ ಬಿಸಾಡಬಾರದು ಮತ್ತು ಸುಡಬಾರದು. ಇದರಿಂದ ರೋಗರುಜಿನ ಹರಡುತ್ತದೆ ಎಂದರು.

ಜಿ. ಪಂ ಸದಸ್ಯ ಹಾಗೂ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಯು ಪಿ ಇಬ್ರಾಹಿಂ ಮಾತನಾಡಿ ಅಂಗನವಾಡಿ ತಾಯಿಯೋಪಾದಿಯಲ್ಲಿ ಕೆಲಸ ಮಾಡುತ್ತಿದೆ. ಇಲ್ಲಿ ಮಕ್ಕಳಿಗೆ ದೇಶದ ಉತ್ತಮ ಪ್ರಜೆಗಳಾಗುವ ಬಾಲ್ಯದ ಶಿಕ್ಷಣ ಸಿಗುತ್ತದೆ. ಸ್ವಚ್ಚತೆ ನಮ್ಮ ಮನಸ್ಸಿಂದ ಹುಟ್ಟಬೇಕು, ಆಗ ಪರಿಸರ ಸ್ವಚ್ಚವಾಗಿರುತ್ತದೆ ಎಂದರು.

ಅಂಗನವಾಡಿಯ ಪುಟಾಣಿಗಳ ಕಾರ್ಯಕ್ರಮಗಳಿಗೆ ಎಲ್ಲರಿಂದಲೂ ಪ್ರೋತ್ಸಾಹ ಸಿಗಬೇಕು. ಆಗಲೇ ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ಸಿಕ್ಕಂತಾಗುತ್ತದೆ ಎಂದು ಪೊಳಲಿ ಜಯರಾಮಕೃಷ್ಣ ಹೇಳಿದರು.

ಬಾಲವಿಕಾಸ ಸಮಿತಿ ಅಂಗನವಾಡಿಯ ಅಧ್ಯಕ್ಷ ಕರಿಯಂಗಳ ಗ್ರಾ.ಪಂ.ಸದಸ್ಯ ಇಬ್ರಾಹಿಂ ನವಾಜ್ ಪ್ರಸ್ತಾವಿಕ ಮಾತನಾಡಿದರು. ವೇದಿಕೆಯಲ್ಲಿ ಕೃಷ್ಣ ಮೂಲ್ಯ, ಡೆಕ್ಕನ್ ಹೆರಾಲ್ಡಿನ ನಯನಾ, ಬಶೀರ್ ಅಹ್ಮದ್ ಗಾಣೆಮಾರ್, ಉಮೇಶ ಗಾಣೆಮಾರ್, ಶೇಖರ ಬಂಗೇರಾ ಗಾಣೆಮಾರ್, ಬಿ.ಎಸ್ ಮೊಹಮ್ಮದ್ ಬಡಕಬೈಲು, ಮೊಹಮ್ಮದ್ ಗಾಣೆಮಾರ್, ಬಂಟ್ವಾಳ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಲ್ಲಿಕಾ, ಪಂಚಾಯತ್ ಸದಸ್ಯ ಸುರೇಶ ಪೂಜಾರಿ, ಸುಂದರ ಪೂಜಾರಿ(ಮಕ್ಕಳು ಮತ್ತು ಮಹಿಳಾ ಅಭಿವೃದ್ದಿ ಇಲಾಖೆ ಉಪನಿರ್ದೇಶಕ), ಇಂದಿರಾ ಇದ್ದರು. ರೇಣುಕಾ ಎಸ್ ಬಂಗೇರ ಸ್ವಾಗತಿಸಿದರು. ಜನಾರ್ದನ ಅಮ್ಮುಂಜೆ ಕಾರ್ಯಕ್ರಮ ನಿರೂಪಿಸಿದರು.

More from the blog

ಅನರ್ಹ ಮತದಾರರ ಮತವನ್ನು ಚುನಾವಣಾ ಫಲಿತಾಂಶದ ಮತ ಎಣಿಕೆಗೆ ಪರಿಗಣಿಸಬಾರದು: ಉಚ್ಚ ನ್ಯಾಯಾಲಯದ ತೀರ್ಪು

ಬಂಟ್ವಾಳ: ಮಡಂತ್ಯಾ‌ರ್ ಪ್ರಾಥಮಿಕ ಸಹಕಾರಿ ಕೃಷಿ ಪತ್ತಿನ ಚುನಾವಣೆಯಲ್ಲಿ ಮತದಾನದ ಹಕ್ಕನ್ನು ಪಡೆದಿರುವ ವ್ಯಕ್ತಿಗಳ ಮತವನ್ನು ಚುನಾವಣಾ ಫಲಿತಾಂಶದ ಮತ ಎಣಿಕೆಯಲ್ಲಿ ಪರಿಗಣಿಸಬಾರದು ಎಂದು ಕರ್ನಾಟಕ ಉಚ್ಚ ನ್ಯಾಯಲಯವು ಐತಿಹಾಸಿಕ ತೀರ್ಪನ್ನು ಹೊರಡಿಸಿದೆ. ಮಡಂತ್ಯಾ‌ರ್ ಪ್ರಾಥಮಿಕ...

ಬಂಟ್ವಾಳ : ತಾಲೂಕು ಆಸ್ಪತ್ರೆಗೆ ವೈದ್ಯರನ್ನು ನೀಡಿ – ಸಚಿವ ದಿನೇಶ್ ಗುಂಡೂರಾವ್ ಗೆ ಮನವಿ

ಬಂಟ್ವಾಳ: ಸುಸಜ್ಜಿತವಾದ ಆಸ್ಪತ್ರೆಯಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿದೆಯಾದರೂ ರೋಗಿಗಳಿಗೆ ಚಿಕಿತ್ಸೆ ನೀಡಲು ಸರಿಯಾದ ವಿಭಾಗದಲ್ಲಿ ವೈದ್ಯರುಗಳಿಲ್ಲದೆ, ತಾಲೂಕಿನ ಬಡ ರೋಗಿಗಳಿಗೆ ತೊಂದರೆಯಾಗುತ್ತಿದ್ದು, ಕೂಡಲೇ ಸಮಸ್ಯೆ ಬಗೆಹರಿಸಲು ಸಾಮಾಜಿಕ ಕಾರ್ಯಕರ್ತ ಸಮಾದ್ ಕೈಕಂಬ ಅವರು...

ಕಣಿಯೂರು: ನುಡಿನಮನ, ಯಕ್ಷಗಾನ ತಾಳಮದ್ದಳೆ

ವಿಟ್ಲ: ಕನ್ಯಾನ ಕಣಿಯೂರು ಶ್ರೀ ಚಾಮುಂಡೇಶ್ವರಿ ದೇವಿ ಕ್ಷೇತ್ರದಲ್ಲಿ ಇತ್ತೀಚೆಗೆ ನಿಧನರಾದ ಯಕ್ಷಗಾನ ಕಲಾವಿದ, ಉಪನ್ಯಾಸಕ ಪಕಳಕುಂಜ ಶ್ಯಾಮ್ ಭಟ್, ಕೂಡ್ಲು ಗಣಪತಿ ಭಟ್ ಅವರಿಗೆ ನುಡಿ ನಮನ ಹಾಗೂ ಯಕ್ಷಗಾನ ತಾಳಮದ್ದಳೆ...

ಒಡಿಯೂರಿನಲ್ಲಿ 25ನೇ ತುಳು ಸಾಹಿತ್ಯ ಸಮ್ಮೇಳನ ಉದ್ಘಾಟನೆ

ವಿಟ್ಲ: ಒಡಿಯೂರು ರಥೋತ್ಸವ ತುಳುನಾಡ ಜಾತ್ರೆಯ ಅಂಗವಾಗಿ 25 ನೇ ವರ್ಷದ ತುಳು ಸಾಹಿತ್ಯ ಸಮ್ಮೇಳನ ಶ್ರೀ ಸಂಸ್ಥಾನದ ರಾಜಾಂಗಣದಲ್ಲಿ ನಡೆಯಿತು. ಸಮ್ಮೇಳನ ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ...