Tuesday, February 11, 2025

ಗಜಲ್ 59

ತಿನ್ನಬೇಕು ಅಂದರೆ ಇನ್ನೊಂದಿಷ್ಟು ಸಾಕು ಎನಿಸುವ ಸಂಕೋಚ ಕಿರಿಕಿರಿ ಮುಜುಗರ/
ಪ್ರೀತಿಯ ಉಪಚಾರ ಒಳಗಿನಿಂದ ಒದ್ದೆ ಮುದ್ದೆ ಅನುಭವ ಕುರಿಮರಿ ಮುಜುಗರ//

ಕಾರ್ಯಕ್ರಮದ ಭಾಷಣ ಸತತ ಅಭ್ಯಾಸ ತಯಾರಾಗಿದ್ದೆ ಚಿಂದಿ ಉಡಾಯಿಸಲೆಂದೆ/
ಹೆಸರು ಘೋಷಣೆ ನಡುಕ ವೇದಿಕೆ ಭಯ ನಾಚಿಕೆಯ ಪ್ರವೃತ್ತಿ ಗರಿಗರಿ ಮುಜುಗರ//

ಇದೆ ಏನನ್ನಾದರೂ ಎದುರಿಸುವ ತಾಕತ್ತು ಗಂಡೆದೆಯ ಗುಂಡಿಗೆಯಿದು ಸೈ ಸವಾಲಿಗೆ/
ಹೋದಾಗ ಸಂದರ್ಶನಕ್ಕೆ ಕೇಳುವ ಪ್ರಶ್ನೆಗೆ ಉತ್ತರ ಅಳುಕು ಬಾರಿಬಾರಿ ಮುಜುಗರ//

ಯಾವುದು ಮೊದಲಲ್ಲ ಆಗಿವೆ ಕೆಲವು ಯತ್ನ ಬದಲಾಗದ ಮನೋಭಾವ ಸ್ಥಿರ /
ಯಾರೇನು ಅಂದುಕೊಂಡಾರು ಆಗುವುದೆ ನನ್ನಿಂದ ಕೀಳರಿಮೆ ಪಿರಿಪಿರಿ ಮುಜುಗರ//

ಆತ್ಮೀಯ ಭಾವ ಹಿಡಿದಿಟ್ಟರೆ ಹಿತ ಹೊರ ಬಿಟ್ಟರೆ ಮಾರಕ ಕುಗ್ಗಿತ್ತು ಬೆಳವಣಿಗೆ/
ಮೈ ಚಳಿ ಬಿಡಿಸಿ ಸೆಡ್ಡು ಹೊಡೆದಾಗ ಆತ್ಮವಿಶ್ವಾಸ ಕೆಂಡ ನಿರಿ ನಿರಿ ಮುಜುಗರ//

ಹತ್ತಾರು ಹೊಯ್ದಾಟ ಮೇಲಿಂದ ಮೇಲೆ ತಾಕಲಾಟ ಇದು ಅಂತರಂಗ ತೊಳಲಾಟ/
ಆಗಿದ್ದಾಗಲಿ ನೋಡೋಣವೆಂದಾಗ ಹೊಕ್ಕ ಮನೋಬಲ ಚಿಂದಿ ಪರಿಪರಿ ಮುಜುಗರ//

ಬಸವರಾಜ ಕಾಸೆ

More from the blog

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಮಂಗಳೂರು: 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ದುಬಾೖಯಿಂದ ಜ.17ರಂದು ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್‌ ರೋಗ ಲಕ್ಷಣಗಳು...