Saturday, February 8, 2025

*ಕೋರಿಕೆ*

ಇಳಿಜಾರು ಪಥದಲಿ ಹಾರು
ಗುದುರೆಯನೇರಿ ಮೆರೆಯುವ
ವಕ್ರತೆಯನು ಹೆಕ್ಕಿ ಸಾಗುವ
ರಮ್ಯ ಕಲೆಯನು ಕರುಣಿಸು

ಮೇಲು ಕೀಳಿನ ಅಸಮ ಗಿರಿ
ಯಾಗ್ರದಲಿ ನರ್ತಿಸಿ ನುಲಿವ
ದಿನ್ನೆಗಳೆದೆಯನರಳಿಸುವ
ಗಮ್ಯ ಬಲೆಯನು ಕರುಣಿಸು

ಬೆರೆವೆ ಕಂಗಳ ಕಾಂತಿಯ
ಲುಗಿಸಿ ಉಲಿವ ಮದವನು
ಮುದದೆ ಹದನಂಗೈವ
ಭವ್ಯ ಒಲವನು ಕರುಣಿಸು

ಅರಿವಿನುರಿಯಲಿ ಬೆವರಿ
ನಿಂದಿಹ ಅಹಮಿಕೆಯ ಹಿರಿ
ಗರ್ವವನದುಮಿ ಗದುಮುವ
ದಿವ್ಯ ಬಲವನು ಕರುಣಿಸು

ಕಾಳಕೋಟದ ವಿಷವನಿಕ್ಕಿ
ಜೀವ ಜಂತುವ ಮುಕ್ಕಿ ನೆಕ್ಕಿ
ಸೊಕ್ಕಿನಲಲೆವವರನರೆವ
ಶಕುತಿ ವರವನು ಕರುಣಿಸು

ಸಾರವಳಿಯದ ಶೂನ್ಯದಾಚೆಯ
ಬಯಲ ಆಲಯದಾ ದಿಗಂತವ
ತೋರಿ ಏರುವ ದಾರಿ ತೋರಿಪ
ಮುಕುತಿ ಗುರುವನು ಕರುಣಿಸು

#ನೀ. ಶ್ರೀಶೈಲ ಹುಲ್ಲೂರು
ಮಂದಹಾಸ ಬಸವೇಶ್ವರ ವೃತ್ತ
ಜಮಖಂಡಿ – 587301

More from the blog

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಮಂಗಳೂರು: 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ದುಬಾೖಯಿಂದ ಜ.17ರಂದು ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್‌ ರೋಗ ಲಕ್ಷಣಗಳು...

ಬೋಗೋಡಿ ಸಲ್-ಸಬೀಲ್ ಸಂಸ್ಥೆಯ 11ನೇ ವಾರ್ಷಿಕ ಮಹಾಸಭೆ : ಅಧ್ಯಕ್ಷರಾಗಿ ಜಮಾಲ್ ಬಂಗ್ಲೆಗುಡ್ಡೆ ಆಯ್ಕೆ

ಪಾಣೆಮಂಗಳೂರು : ಸಲ್-ಸಬೀಲ್ ಸ್ಟೂಡೆಂಟ್ಸ್ ಎಸೋಸಿಯೇಶನ್ ಬೋಗೋಡಿ ಇದರ 11ನೇ ವಾರ್ಷಿಕ ಮಹಾಸಭೆ ಇತ್ತೀಚೆಗೆ ಝೋಮ್ ಮೀಟಿಂಗ್‌ನಲ್ಲಿ ನಡೆಯಿತು. ಸಂಸ್ಥೆಯ ಅಧ್ಯಕ್ಷರಾಗಿ ಜಮಾಲ್ ಬಂಗ್ಲಗುಡ್ಡೆ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ರಿಲ್ವಾನ್ ಮೆಲ್ಕಾರ್ ಅವಿರೋಧವಾಗಿ...

ದಿವ್ಯಾಂಗತೆಯ ಕುರಿತು ಜಾಗೃತಿ ಕಾರ್ಯಕ್ರಮ

ಬಂಟ್ವಾಳ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಿ‌ಮೂಡ, ಅಜ್ಜಿಬೆಟ್ಟು, ಬಿ ಸಿ ರೋಡ್, ಬಂಟ್ವಾಳ ತಾಲೂಕು ಇಲ್ಲಿ ದಿವ್ಯಾಂಗತೆಯ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮವು ಜ.22ರಂದು ಜರಗಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ವಿಕಾಸಂ...