Monday, February 10, 2025

ಕನ್ನಡ ಕಂಪಿನ ಅರಗಿಣಿ

ಹೌದು ಹೇಗಿರಬೇಕು ನನ್ನವಳು
ಪದೇ ಪದೇ ಕಾಡಿದ ಪ್ರಶ್ನೆಗೆ ಉತ್ತರ
ಏನೆಲ್ಲಾ ಅನಿಸಿತು ಹೇಳಬೇಕೆ ಆ ಕ್ಷಣ
ಒಡಮೂಡಿದ ಆ ಸಾಲುಗಳ ಹಂದರ

ಮೊದಲ ನೋಟದಲ್ಲಿ ಮನ ಸೆಳೆಯುವ
ಅವಳ ಕಂಗಳಲ್ಲಿ ಬಾಳು ಬೆಳಗುವ ದೀಪ
ಘಲ್ ನಾದಕ್ಕೆ ಎದೆ ಝಲ್ ಆಗುವ ಭಾವ
ಮೆಲ್ಲನೆ ತದೇಕ ಚಿತ್ತ ತನ್ಮಯ ಸಲ್ಲಾಪ

ಸೀರೆ ಉಡುವ ಸಂಸ್ಕೃತಿಯ ಸೊಗಡು
ಸರಳ ಅಂದದ ಕನ್ನಡ ಕಂಪಿನ ಅರಗಿಣಿ
ಚಂದನ ತೀಡಿದಂತೆ ವ್ಯಾಪಿಸಿದ ಸೌಗಂಧ
ನಕ್ಕೊಡನೆ ತುಂಬಬೇಕು ಖುಷಿಯ ಗಣಿ

ಮನೆಗೆ ಇರಬೇಕು ಹೊಂದಿಕೊಂಡು
ನಡೆ ನುಡಿಯಲ್ಲಿ ಇರಲಿ ನನಗಿಂತ ಎತ್ತರ
ಅಡಿಗೆಯ ಪರಿಣಿತಿ ಒಂದಿಷ್ಟು ಶುಚಿ ರುಚಿ
ವಿದ್ಯೆ ಬುದ್ಧಿ ಹಿತ ಮಿತವಾಗಿದ್ದರೆ ಸುಂದರ

ಪ್ರತಿ ವಿಷಯಗಳ ಚರ್ಚೆ ಪರಸ್ಪರರ ಅರ್ಥ
ತೋರಿಸುವ ಪ್ರೀತಿ ನಕ್ಷತ್ರಗಳ ಶಿಖರ
ಇಷ್ಟ ಕಷ್ಟ ಬೇಕು ಬೇಡಗಳ ವಿನಿಮಯ
ಅರಿತು ನಡೆಯಬೇಕು ಜೊತೆಗೆ ನಿರಂತರ

ಬಸವರಾಜ ಕಾಸೆ

More from the blog

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಮಂಗಳೂರು: 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ದುಬಾೖಯಿಂದ ಜ.17ರಂದು ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್‌ ರೋಗ ಲಕ್ಷಣಗಳು...