ಬಂಟ್ವಾಳ: ಲಾಕ್ ಡೌನ್ ಸಂಕಷ್ಟದ ದಿನಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಬಡವರ ನ್ನು ಗುರುತಿಸಿ ಅವರಿಗೆ ಬಿಸಿರೋಡಿನ ಹರೀಶ್ ಗುರುಸ್ವಾಮಿ ಅವರ ನೇತ್ರತ್ವದಲ್ಲಿ ಅಯ್ಯಪ್ಪ ಬಳಗದ ವತಿಯಿಂದ ಕಿಟ್ ನೀಡುವ ಕಾರ್ಯಕ್ರಮ ಬಿಸಿರೋಡಿನ ಚಂಡಿಕೇಶ್ವರಿ ದೇವಸ್ಥಾನ ದ ವಠಾರದಲ್ಲಿ ಆದಿತ್ಯವಾರ ನಡೆಯಿತು.
ಈ ಸಂದರ್ಭದಲ್ಲಿ ಆಯ್ಯಪ್ಪ ಭಕ್ತ ವೃಂದದ ಪ್ರಮುಖರಾದ ಶಶಿಧರ, ಸುರೇಶ್, ಉಮೇಶ್ ರಾಮಣ್ಣ, ತಾರಾನಾಥ, ವೇದಾವತಿ ಸೇರಿದಂತೆ ಫಲಾನುಭವಿಗಳು ಉಪಸ್ಥಿತರಿದ್ದರು.