Sunday, October 22, 2023

ಕರಾವಳಿ ಕುಂಬಾರರಿಂದ ನರಿಕೊಂಬು ಸುಕುಮಾರ್ ಅವರಿಗೆ ಗೌರವ

Must read

ಬಂಟ್ವಾಳ: ಮುಂಬಾಯಿ ಬಾರ್ಜ್ ನ ಇಂಧನ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದ ವೇಳೆ ಚಂಡಮಾರುತದ ಪರಿಣಾಮ ಬಾರ್ಜ್ ಮುಳುಗಡೆಯಾಗಿ ಸುಮಾರು ಹನ್ನೆರಡು ಗಂಟೆಗಳ ಸಮುದ್ರದ ನೀರಿನಲ್ಲಿ ಈಜಿ‌ ಪವಾಡ ಎಂಬಂತೆ ಬದುಕಿ ಬಂದ ನರಿಕೊಂಬು ಮಾರುತಿನಗರ ನಿವಾಸಿ ಸಾಹಸಿ, ಧೈರ್ಯಶಾಲಿ ಯುವಕ ಬಂಟ್ವಾಳ ತಾಲೂಕು ಕುಲಾಲ ಹಿರಿಯ ನಾಗರಿಕರ ಕ್ಷೇಮಾಭಿವ್ರ್ ದ್ಧಿ ಸಂಘದ* *ಸದಸ್ಯರಾದ ಕೃಷ್ಣಪ್ಪ ಮೂಲ್ಯರವರ ಪುತ್ರ ಸುಕುಮಾರ್

ಅವರನ್ನು ಕರಾವಳಿ ಕುಲಾಲ ಯುವವೇದಿಕೆ ಪರವಾಗಿ ಮನೆಗೆ ತೆರಳಿ ಕುಶಲೋಪರಿ ವಿಚಾರಿಸಿ.. ವೇದಿಕೆಯ ಜಿಲ್ಲಾಧ್ಯಕ್ಷ ಸುಕುಮಾರ್ ಬಂಟ್ವಾಳ್ ನೇತೃತ್ವದಲ್ಲಿ ಅಭಿನಂದಿಸಿ* *ಗೌರವಿಸಲಾಯಿತು. ಈ ಸಂದರ್ಭದಲ್ಲಿ ,ಯುವ ವೇದಿಕೆಯ ಬಂಟ್ವಾಳದ ಅಧ್ಯಕ್ಷ ಸತೀಶ್ ಜಕ್ರಿಬೆಟ್ಟು, ಜಿಲ್ಲಾ ಸಂಚಾಲಕ ಕಾರ್ತಿಕ್ ಬಂಟ್ವಾಳ್, ವಲಯ ಕಾರ್ಯದರ್ಶಿ ಪುನೀತ್ ಮೈರಾನಪಾದೆ,ಕೋಶಾಧಿಕಾರಿ ಕವಿರಾಜ್ ಚಂದ್ರಿಗೆ, ಜೊತೆ ಕಾರ್ಯದರ್ಶಿ ವಿತೇಶ್ ಕಾಮಾಜೆ, ಪ್ರಸಾದ್ *ಮರ್ದೋಳಿ ಹಾಗೂ ಕುಲಾಲ ಹಿರಿಯ ನಾಗರಿಕರ ಕ್ಷೇಮಾಭಿವ್ರ್ ದ್ಧಿ ಸಂಘದ ಕಾರ್ಯದರ್ಶಿ ಶೇಷಪ್ಪ ಮಾಸ್ಟರ್*ಸದಸ್ಯರಾದ ಡೊಂಬಯ್ಯ ಕುಲಾಲ್ ಜೊತೆಗಿದ್ದರು*

More articles

Latest article