Thursday, October 26, 2023

ಅಕ್ರಮ ಮರ ಸಾಗಾಟ: ಆರೋಪಿ ಸಹಿತ ಲಕ್ಷಾಂತರ ರೂ ಮೌಲ್ಯದ ಸೊತ್ತು ವಶ

Must read

ಮಂಗಳೂರು : ಲಕ್ಷಾಂತರ ರೂ ಮೌಲ್ಯದ ಮರ ಸಾಗಾಣಿಕೆ ವಾಹನ ಸಹಿತ ಆರೋಪಿಯನ್ನು ಅರಣ್ಯ ಇಲಾಖಾ ಅಧಿಕಾರಿಗಳು ಬಂಧಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಕಾಪು ತಾಲೂಕ್ ಸುಭಾಶನಗರ ಮೂಡಬೇತ್ತು ಗ್ರಾಮದ ಮಹಮದ್ ಹಾರೂನ್ ಬಂಧಿತ ಆರೋಪಿ.

ಅಂದಾಜು 2.5ಲಕ್ಷ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮೇ. 25 ರಂದು ಮುಂಜಾನೆ ಮಂಗಳೂರು ತಾಲೂಕು ಸುರತ್ಕಲ್ ಗ್ರಾಮದ ರಾಷ್ಟ್ರೀಯ ಹೆದ್ದಾರಿ ೬೬ ರ ಮುಕ್ಕ ಎಂಬಲ್ಲಿಅಕ್ರಮವಾಗಿ ರಹದಾರಿ ರಹಿತ ಮರದ ದಿಮ್ಮಿಗಳನ್ನು ಸಾಗಾಟ ಮಾಡುವ ಮಾಹಿತಿ ಮೇರೆ ಗೆ ಮಂಗಳೂರು ವಲಯ ಅರಣ್ಯಾಧಕಾರಿ ಯಾದ ಶೀರ್ಧರ್ ಪಿ ಅವರ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿ ಗಳಾದ ಕೃಷ್ಣ , ವಿನಯ್ ಕುಮಾರ್, ಮೋಹನ್, ಸೋಮನ ಗೌಡ ಪಾಟೀಲ್ ಹಾಗೂ ಚಾಲಕ ಸುನಿಲ್ ಬಿ ಸಿ ಪತ್ತೆ ಹಚ್ಚಿ ಕೇಸು ದಾಖಲಿಸಿರು ತ್ತಾರೆ..ಆರೋಪಿ ಚಾಲಕನಾದ ಕಾಪು ತಾಲೂಕ್ ಸುಭಾಶನಗರ ಮೂಡಬೇತ್ತು ಗ್ರಾಮದ ಮಹಮದ್ ಹಾರೂನ್ ಮೇಲೆ ಪ್ರಕರಣ ದಾಖಲಿಸಿಕೊಂಡು ಸೊತ್ತು ಮತ್ತು ವಾಹನವನ್ನು ಸರ್ಕಾರದ ಪರವಾಗಿ ಅಮಾನತು ಮಾಡಿ ಕೊಳ್ಳಲಾಯಿತು.

ಮುಂದಿನ ತನಿಖೆಯನ್ನು ಡಿಸಿಎಫ್ ಕರಿಕಳನ್ ಮತ್ತು ಎಸಿಎಫ್ ಸುಬ್ರಮಣ್ಯ ರಾವ್ ಇವರ ನಿರ್ದೇಶನದಂತೆ ವಲಯ ಅರಣ್ಯಾಧಿಕಾರಿ ಶ್ರೀಧರ್ ಪೀ ನೆಡೆಸುತಿದ್ದಾರೆ..

More articles

Latest article