ಬಂಟ್ವಾಳ: ರಮಝಾನ್ ತಿಂಗಳು ಕೊನೆಯಾಗಿದ್ದು ಗುರುವಾರ ಕರಾವಳಿ ಜಿಲ್ಲೆಗಳ ಮುಸ್ಲಿಮರು ಈದುಲ್ ಫಿತ್ರ್ ಆಚರಿಸಲಿದ್ದಾರೆ.
ಕರಾವಳಿ ಜಿಲ್ಲೆಗಳ ಮುಸ್ಲಿಮರು ರಮಝನ್ ತಿಂಗಳ 30 ಉಪವಾಸವನ್ನು ಬುಧವಾರ ಸಂಜೆ ಪೂರ್ತಿಗೊಳಿಸಿದ್ದಾರೆ.
ಕರಾವಳಿ ಜಿಲ್ಲೆಗಳನ್ನು ಹೊರೆತು ಪಡಿಸಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಚಂದ್ರ ದರ್ಶನ ಆಗದ ಹಿನ್ನೆಲೆಯಲ್ಲಿ ಶುಕ್ರವಾರ ಈದುಲ್ ಫಿತ್ರ್ ಆಚರಣೆಗೆ ಚಂದ್ರ ದರ್ಶನ ಸಮಿತಿ ತಿಳಿಸಿದೆ. ಆ ಜಿಲ್ಲೆಗಳಲ್ಲಿ ಒಂದು ದಿನ ತಡವಾಗಿ ರಮಝನ್ ತಿಂಗಳು ಆರಂಭಗೊಂಡ ಚಂದ್ರ ದರ್ಶನವಾಗಿತ್ತು.
ಕೊರೋನ ನಿಯಂತ್ರಣಕ್ಕೆ ರಾಜ್ಯಾದ್ಯಂತ ಲಾಕ್ ಡೌನ್ ಜಾರಿಯಲ್ಲಿ ಇರುವುದರಿಂದ ಮಸೀದಿಗಳನ್ನು ಮುಚ್ಚಲಾಗಿದೆ. ಹೀಗಾಗಿ ಹಬ್ಬದ ಪ್ರಯುಕ್ತ ಮಸೀದಿಗಳಲ್ಲಿ ನಡೆಯುವ ವಿಶೇಷ ಪ್ರಾರ್ಥನೆಗಳನ್ನು ರದ್ದು ಮಾಡಲಾಗಿದೆ. ಮನೆಯಲ್ಲೇ ಪ್ರಾರ್ಥನೆ ಮಾಡುವ ಮೂಲಕ ಸರಳವಾಗಿ ಈದ್ ಆಚರಣೆಗೆ ಮುಸ್ಲಿಮ್ ವಿದ್ವಾಂಸರು ಕರೆ ನೀಡಿದ್ದಾರೆ.