Wednesday, October 18, 2023

ಅಣ್ಣಪ್ಪ ಪಂಜುರ್ಲಿ ದೈವದ ನೇಮೋತ್ಸವ

Must read

ಬಂಟ್ವಾಳ: ಬಾಳ್ತಿಲ ಗ್ರಾಮದ ಅಣ್ಣಪ್ಪ ಪಂಜುರ್ಲಿ ಮೂಲಸ್ಥಾನ ಮಂಜನಗುಡ್ಡೆ ಕುರ್ಮನ್ ಇಲ್ಲಿನ ವರ್ಷಪ್ರತಿ ಜಾತ್ರಾ ಮಹೋತ್ಸವ ಏ.7 ಮತ್ತು 8 ರಂದು ನಡೆಯಿತು. ಏ.7 ರಂದು ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆ ಯನ್ನು ಹಿರಿಯರು ಢಾ ಕಮಲ ಪ್ರಭಾಕರ್ ಭಟ್ ವಹಿಸಿದರು. ಕರ್ನಾಟಕ ಧಾರ್ಮಿಕ ಪರಿಷತ್ ಸದಸ್ಯರಾದ ಕಶೆಕೊಡಿ ಸೂರ್ಯನಾರಾಯಣ ಭಟ್ ಮಾತನಾಡಿ ನಮ್ಮ ಧಾರ್ಮಿಕ ಕೇಂದ್ರದ ಒಂದೇ ಒಂದು ಪೈಸೆ ಕೂಡ ಈಗ ಒಂದು ವರ್ಷದಿಂದ ಅನ್ಯ ಮತದ ಅಭಿವೃದ್ಧಿಗೆ ಹೋಗ್ತಾ ಇಲ್ಲ ಎಂದರು. ಕಟ್ಟೆಮಾರ್ ಮಂತ್ರದೇವತಾ ಸಾನಿಧ್ಯದ ಮನೋಜ್ ಕಟ್ಟೆಮಾರ್ ಅಣ್ಣಪ್ಪ ಪಂಜುರ್ಲಿಯ ಕಾರಣಿಕದ ಬಗ್ಗೆ ಹೇಳಿದರು. ಯುವ ನ್ಯಾಯವಾದಿ ಶ್ರೀಧರ ಶೆಟ್ಟಿ ಪುಲಿಂಚ ಮಾತನಾಡಿ ಕೊರೋಣ ಬಂದು ಧಾರ್ಮಿಕ ನಂಬಿಕೆ ಜಾಸ್ತಿಯಾಯಿತು. ವೇದಿಕೆಯಲ್ಲಿ ಬಾಲ್ತಿಲ ಗ್ರಾಮ ಪಂಚಾಯತ್ ನ ಅಧ್ಯಕ್ಷರು ಮತ್ತು ಯುವ ಉದ್ಯಮಿ ರಮೇಶ್ ಕಲ್ಲಡ್ಕ ಬಜರಂಗದಳ ಸಂಚಾಲಕರು ಮಿಥುನ್ ಕಲ್ಲಡ್ಕ ಹಾಗೂ ದೈವಸ್ಥಾನದ ಅಧ್ಯಕ್ಷ ಕೃಷ್ಣಪ್ಪ ಕಲ್ಲಡ್ಕ ಉಪಸ್ಥಿತರಿದ್ದರು. ಅಣ್ಣಪ್ಪ ಪಂಜುರ್ಲಿ ಮತ್ತು ಮಹಮ್ಮಾಯಿ ದೈವಸ್ಥಾನ ಪೂರ್ಲಿಪ್ಪಾಡಿ ಇದರ ಅಧ್ಯಕ್ಷರು ಚೆನ್ನಪ್ಪ ಕೋಟ್ಯಾನ್ ಪ್ರಸ್ತಾವನೆ ಮಾಡಿ ಸ್ವಾಗತಿಸಿ ದೈವಸ್ಥಾನದ ಪ್ರದಾನ ಕಾರ್ಯದರ್ಶಿ ಬಿ ಕೆ ಬಾಲಕೃಷ್ಣ ಪೂಜಾರಿ ವಂದನಾರ್ಪಣೆ ಗೈದರು.

More articles

Latest article