Monday, October 23, 2023

ಎಪ್ರಿಲ್ 3 ರಂದು ನೇರಳಕಟ್ಟೆಯಲ್ಲಿ ಜನಪ್ರಿಯ ಸಮ್ಮಿಲನ ಉಚಿತ ವಿವಾಹ, ಜನಪ್ರಿಯ ಪ್ರಶಸ್ತಿ ಪ್ರದಾನ

Must read

ಬಂಟ್ವಾಳ : ಮಾಣಿ ಸಮೀಪದ ನೇರಳಕಟ್ಟೆ ಜನಪ್ರಿಯ ಗಾರ್ಡನ್ಸ್ ಗೆ 2 ವರ್ಷ ತುಂಬಿದ ಸ್ಮರಣಾರ್ಥ ಅಶಕ್ತ ಕುಟುಂಬದ ಉಚಿತ ವಿವಾಹ ಹಾಗೂ ಜನಪ್ರಿಯ ಪ್ರಶಸ್ತಿ ಪ್ರದಾನ ಸಮಾರಂಭ ಜನಪ್ರಿಯ ಸಮ್ಮಿಲನವು ಎಪ್ರಿಲ್ 03 ಶನಿವಾರ ಸಂಜೆ 05:30ಕ್ಕೆ ಜನಪ್ರಿಯ ಗಾರ್ಡನ್ಸ್ ನಲ್ಲಿ ಜರುಗಲಿದೆ.

ಜನಪ್ರಿಯ ಸಮೂಹ ಸಂಸ್ಥೆಗಳ ನಿರ್ಮಾತೃ ಹಾಗೂ ಹಾಸನದ ಖ್ಯಾತ ವೈದ್ಯರಾದ ಡಾ. ಅಬ್ದುಲ್ ಬಶೀರ್ ವಿ.ಕೆ. ಅವರು ಅಧ್ಯಕ್ಷತೆ ವಹಿಸಲಿದ್ದು, ಸಾಮಾಜಿಕ ರಾಜಕೀಯ, ಶೈಕ್ಷಣಿಕ, ಧಾರ್ಮಿಕ ಗಣ್ಯರು ಭಾಗವಹಿಸಲಿದ್ದಾರೆ. ಈ ಸಂದರ್ಭ ಉಚಿತ ವಿವಾಹ ನಡೆಯಲಿದೆ.

ಖ್ಯಾತ ಉದ್ಯಮಿ ಹಾಗೂ ಸಮಾಜಸೇವಕರಾದ ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು, ಸಾಹಿತಿ, ಕೃಷಿಕ, ಶಿಕ್ಷಣ ತಜ್ಞರಾದ ಡಾ| ನರೇಂದ್ರ ರೈ ದೇರ್ಲ ಹಾಗೂ ಸದ್ದಿಲ್ಲದೇ ಹಗಲಿರುಳು ಬಡವರ ಸೇವೆಗೈಯ್ಯುವ ಉದ್ಯಮಿ ಆಸ್ಕರ್ ಆನಂದ್ ಅವರಿಗೆ ಈ ಬಾರಿಯ ಜನಪ್ರಿಯ ಪ್ರಶಸ್ತಿ ನೀಡಿ ಪುರಸ್ಕರಿಸಲಾಗುವುದು. ಇದೇ ಸಂದರ್ಭ ಡಾ. ಅಬ್ದುಲ್ ಬಶೀರ್ ವಿ.ಕೆ. ಹಾಗೂ ನಸ್ರೀನ್ ಬಶೀರ್ ದಾಂಪತ್ಯದ 27ನೇ ವೈವಾಹಿಕ ವರ್ಷಾಚರಣೆ ನಡೆಯಲಿದೆ.

More articles

Latest article