ಕೇರಳ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಪಾಲಕ್ಕಾಡ್ ಜಿಲ್ಲೆಯ ಮಲಂಪುಳ ವಿಧಾನಸಭಾ ಕರ್ನಾಟಕ ರಾಜ್ಯ ಬಿಜೆಪಿಯಿಂದ ನಿಯೋಜನೆಗೊಂಡ ಕ್ಷೇತ್ರದ ಸಂಯೋಜಕರಾದ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕರಾದ ರಾಜೇಶ್ ನಾಯ್ಕ್ ಮಲಂಪುಳದ ಪುದುಶೆರಿ ಪಂಚಾಯತ್ ವ್ಯಾಪ್ತಿಯ ಗಣೇಶ್ ಪುರ ಮತ್ತು ಮುಂಡುರೂ ಪಂಚಾಯತ್ ವ್ಯಾಪ್ತಿಯ ಎಂಡಂವಾಡುವಿನಲ್ಲಿ ಕೇರಳ ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲಂಪುಳ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ನಡೆಸಿ ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಮಣಿಕಂಠನ್ ವಿನೋದ್ ಕ್ರಷ್ಣನ್ ರಾಮಚಂದ್ರನ್ ಹಿಂದು ಐಕ್ಯವೇದಿಯ ಒ ಬಾಲಗೋಪನ್ ಲಘ ಉದ್ಯೋಗ ಭಾರತೀಯ ಪ್ರಮುಖರಾದ ರಾಧಕ್ರಷ್ಣನ್ ಬಂಟ್ವಾಳ ಬಿಜೆಪಿಯ ಪ್ರಮುಖರಾದ ದೇವದಾಸ್ ಶೆಟ್ಟಿ ರಮನಾಥ ರಾಯಿ ನಂದರಾಮ ರೈ ಪ್ರಜ್ವಲ್ ಕುಮಾರ್ ಪವನ್ ಕುಮಾರ್ ಗಣೇಶ್ ರೈ ಉಪಸ್ಥಿತರಿದ್ದರು.