ಬಂಟ್ವಾಳ: ಎರಡು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಪಂಜಿಕಲ್ಲು ಗ್ರಾಮದ ಕೇಲ್ದೋಡಿ ಮನೆ ನಿವಾಸಿ ವ್ಯಕ್ತಿಯೊಬ್ಬರು, ಏಕಾಏಕಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪತ್ತೆಯಾಗಿ ಮಾ.7ರಂದು ಮನೆಗೆ ಮರಳಿದ್ದಾರೆ.
ಕೇಲ್ದೋಡಿ ನಿವಾಸಿ ಕೇಶವ ಪೂಜಾರಿ(36) ಅವರು ಜ.3ರಂದು ಮದುವೆಗೆ ಹೋಗುವುದಾಗಿ ಹೇಳಿ ಹೋದವರು ಹಿಂತಿರುಗಿ ಬಂದಿರಲಿಲ್ಲ. ಆದರೆ ಅವರು ಹಿಂದೆಯೂ 2-3 ಬಾರಿ ಇದೇ ರೀತಿ ಮನೆ ಬಿಟ್ಟು ಹೋಗಿ ಬಳಿಕ ಮನೆಗೆ ಮರಳಿದ್ದರು. ಹೀಗಾಗಿ ಅವರ ಪತ್ನಿ ಯಶೋಧಾ ಅವರು ತಡವಾಗಿ ದೂರು ನೀಡಿದ್ದರು.
ಇವರನ್ನು ಹುಡುಕಿ ಸೋತು ಹೋಗಿದ್ದ ಮನೆಯವರು ಹಾಗೂ ಊರಿನವರು ಮಾ. ರ ಕೇಲ್ದೋಡಿ ಜಾತ್ರೆಯ ಸಂದರ್ಭದಲ್ಲಿ ವೈದ್ಯನಾಥ ದೈವದ ಬಳಿ ಪ್ರಾರ್ಥನೆ ಮಾಡಿದ್ದು, 12ದಿನಗಳಲ್ಲಿ ಹುಡುಕಿ ಕೊಡುವ ಕುರಿತು ದೈವ ಮಾತುಕೊಟ್ಟಿತ್ತು. ಅಚ್ಚರಿ ಎಂಬಂತೆ ಏಳೇ ದಿನಗಳಲ್ಲಿ ಕೇಶವ ಪೂಜಾರಿ ಅವರು ಪತ್ತೆಯಾಗಿದ್ದಾರೆ.