Monday, October 23, 2023

ಕಾಡು ಪ್ರಾಣಿ ಬೇಟೆಗೆ ಹೋದವನಿಗೆ ಜತೆಗಾರನಿಂದ ಗುಂಡೇಟು : ಓರ್ವ ಗಂಭೀರ 

Must read

ಸುಳ್ಯ : ಇಲ್ಲಿನ ಅರಂತೋಡು ದೇರಾಜೆಯ ಗುಡ್ಡ ವೊಂದಕ್ಕೆ ಕಾಡು ಪ್ರಾಣಿ ಬೇಟೆಗೆ ತೆರಳಿದ ವ್ಯಕ್ತಿಯೊಬ್ಬ ರಿಗೆ ತನ್ನ ಜೊತೆಗಾರನೊಬ್ಬ ಕಾಡು ಪ್ರಾಣಿಯೆಂದು ಗ್ರಹಿಸಿ ಗುಂಡಿಕ್ಕಿದ ಘಟನೆ ಯಲ್ಲಿ ಗಾಯಗಳಾಗಿದ್ದು ಸುಳ್ಯದ ಖಾಸಗಿ ಆಸ್ಪತ್ರೆ ಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಘಟನೆಯಲ್ಲಿ ಗಾಯಗೊಂಡ ವ್ಯಕ್ತಿಯನ್ನು ಅರಂತೋಡಿನ ಸತ್ಯಮೂರ್ತಿ ಎಂದು ಹೇಳಲಾಗಿದೆ. ನಾಲ್ಕು ಮಂದಿಯನ್ನೊಳಗೊಂಡ ಸತ್ಯಮೂರ್ತಿಯ ತಂಡ ಕಾಡಿಗೆ ಶಿಕಾರಿಗೆ ತೆರಳಿದ್ದರು. ಅವರು ಬೇರೆ ಬೇರೆ ಕಡೆ ಕಾಡು ಪ್ರಾಣಿಗಳ ಬೇಟೆಯಾಡಲು ಮರೆಯಲ್ಲಿ ಕುಳಿತುಕೊಂಡಿದ್ದರು.

ಸತ್ಯಮೂರ್ತಿ ಒಂದು ಕಡೆ ಬೇಟೆಯಾಡಲು ಅಡಗಿ ಕುಳಿತ್ತಿದ್ದಾಗ ಅಲ್ಲಿ ಶಬ್ದ ಬಂದಾಗ ಅಲ್ಲಿಗೆ ಒಬ್ಬಾತ ಪ್ರಾಣಿಯೆಂದು ಗ್ರಹಿಸಿ ಗುಂಡು ಹಾರಿಸಿದ್ದಾನೆ. ಅದು ಸತ್ಯಮೂರ್ತಿಗೆ ತಾಗಿ ಆತನು ಗಂಬೀರ ಗಾಯಗೊಂಡನು. ಬಳಿಕ ಆತನ‌್ನು ಜತೆಗಾರರು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ. ಸುಳ್ಯ ಎಸ್.ಐ. ಹರೀಶ್ ಆಸ್ಪತ್ರೆಗೆ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

More articles

Latest article