ಬಂಟ್ವಾಳ : ಬಂಟ್ವಾಳ ತಾಲೂಕಿನ ಅಜಿಲಮೊಗರುವಿನಲ್ಲಿ ನೂತನವಾಗಿ ಆರಂಭಗೊಂಡ ಮಕ್ಕಳ ಯಕ್ಷಗಾನ ತಂಡ ಯಕ್ಷ ಚಿಗುರು ಕಲಾತಂಡದ ಉದ್ಘಾಟನೆ ಜ.1ರಂದು ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಬಾಚಕೆರೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಡಿ.20ರಂದು ನಡೆಯಿತು.
ಶ್ರೀ ಕ್ಷೇತ್ರ ಬಾಚಕೆರೆ ಇದರ ಧರ್ಮದರ್ಶಿ ದೇಜಪ್ಪ ಬಾಚಕೆರೆ ಅವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಕ್ಷೇತ್ರದ ಆರ್ಚಕ ಗಿರಿನಾಥ್ ಶರ್ಮ ಬಾಚಕೆರೆ.
ತಂಡದ ಸ್ಥಾಪಕ ನವೀನ್ ಶಾಂತಿ ಅಡ್ಯಾಲು, ಯಕ್ಷಗುರು ಶಶಿಧರ್ ಬಾಚಕೆರೆ, ಭ್ರಮರಾಂಬಿಕ ಸೇವಾ ಸಂಘದ ಸ್ಥಾಪಕ ನಿರಂಜನ್ ಬಾಚಕೆರೆ, ಕಾರ್ಯದರ್ಶಿ ಪುರುಷೋತ್ತಮ ಕಾಯರ್ ಪಲ್ಕೆ, ಉದ್ಯಮಿ ಲೋಕೆಶ್ ಪೂಜಾರಿ ಪುಣ್ಕೆದಡಿ. ನಾರಾಯಣ ಬಜ ಉಪಸ್ಥಿತರಿದ್ದರು