ಬೆಳ್ತಂಗಡಿ: ತುಳುನಾಡಿನ ಭವ್ಯ ಪರಂಪರೆಯನ್ನು ಉಳಿಸಿಕೊಂಡು ಬಂದಿರುವ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲರ ಪಟ್ಟಾಭಿಷೇಕದ ರಜತ ಸಂಭ್ರಮಾಚರಣೆಯನ್ನು ಇಂದು (ಡಿ.1) ಆಚರಿಸಲಾಯಿತು.
ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲರು ಪಟ್ಟಾಭಿಷೇಕಗೊಂಡು ಸಂಸ್ಥಾನದ ಹಿರಿಮೆ ಉಳಿಸಿ ಬೆಳೆಸುವಲ್ಲಿ ಯಶಸ್ವಿಯಾಗುವುದರೊಂದಿಗೆ ಜನಸ್ನೇಹಿ ಅರಸರು ಪ್ರಜಾಪ್ರೀತಿಯನ್ನು ಗಳಿಸಿಕೊಂಡಿದ್ದಾರೆ. ಇದೀಗ ಅರಸರಿಗೆ ಅರಸೊತ್ತಿಗೆಯ ಪಟ್ಟವೇರಿ 25 ವರ್ಷಗಳು ಸಂದಿದ್ದು, ರಜತ ಸಂಭ್ರಮಾಚರಣೆಯಲ್ಲಿದ್ದಾರೆ. ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಾರ್ವಜನಿಕ ಗೌರವಾರ್ಪಣಾ ಕಾರ್ಯಕ್ರಮ ಜರುಗಿತು.