Saturday, October 21, 2023

ಸಿದ್ಧಕಟ್ಟೆ: ಸಾರ್ವಜನಿಕ ಶ್ರೀ ಶಾರದೋತ್ಸವ ವಿಸರ್ಜನಾ ಕಾರ್ಯಕ್ರಮ

Must read

ಬಂಟ್ವಾಳ: ತಾಲೂಕಿನ ಸಿದ್ಧಕಟ್ಟೆಯಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದ ಸಾರ್ವಜನಿಕ ಶ್ರೀ ಶಾರದೋತ್ಸವ ಆಚರಣಾ ಸಮಿತಿ ವತಿಯಿಂದ ದ್ವಿತೀಯ ವರ್ಷ ಪೂಜಿಸಲಾದ ಶಾರದೆ ವಿಗ್ರಹವನ್ನು ಗುರುವಾರ ಸಂಜೆ ನಡೆದ ಸರಳ ಮೆರವಣಿಗೆ ಮೂಲಕ ಫಲ್ಗುಣಿ ನದಿಯಲ್ಲಿ ವಿಸರ್ಜಿಸಲಾಯಿತು.

ಡಾ. ಪ್ರಭಾಚಂದ್ರ ಜೈನ್, ಬೇಬಿ ಕುಂದರ್, ಡಾ. ಯೋಗೀಶ್ ಕೈರೋಡಿ, ಶ್ರೀನಿವಾಸ್ ಆಳ್ವ, ಗೋಪಾಲ ಗೌಡ, ಕಾಂತಣ್ಣ ಶೆಟ್ಟಿ, ಮಾಧವ ಶೆಟ್ಟಿಗಾರ್, ಶ್ರೀಧರ್ ಪೂಜಾರಿ, ಅಶೋಕ ಆಚಾರ್ಯ, ನವೀನ್ ಕುಮಾರಿ ಮತ್ತಿತರರು ಇದ್ದರು.

More articles

Latest article