ಬಂಟ್ವಾಳ: ಬಿ.ಸಿ.ರೋಡಿನ ಮಿನಿ ವಿಧಾನಸೌಧದಲ್ಲಿರುವ ತಾಲೂಕು ಕಚೇರಿಯಲ್ಲಿ ವಾಸ್ತುದೋಷ ಕಂಡು ಬಂದಿದೆ ಎಂದು ಸಂಕಲ್ಪಿಸಿ ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ ಅವರ ನೇತೃತ್ವದಲ್ಲಿ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರೀ ಸನ್ನಿಧಿಯಲ್ಲಿ ಇಂದು ಬೆಳಗ್ಗೆ ಮಹಾ ಮೃತ್ಯುಂಜಯ ಹೋಮ ಆರಂಭಗೊಂಡಿದೆ.
ಕಳೆದ ಕೆಲವು ತಿಂಗಳ ಹಿಂದೆ ತಾಲೂಕು ಕಚೇರಿಯ ಇಬ್ಬರು ಉಪತಹಶೀಲ್ದಾರ್ ಗಳು ಅನಾರೋಗ್ಯದಿಂದ ಮೃತಪಟ್ಟಿದ್ದು, ಹೀಗಾಗಿ ಜಿ.ಪಂ.ಸದಸ್ಯರು ಪ್ರಶ್ನಾಚಿಂತನೆ ನಡೆಸಿದ್ದರು.
ಶ್ರೀ ವೆಂಕಟರಮಣ ಮುಚ್ಚಿನ್ನಾಯರ ಪ್ರಶ್ನಾಚಿಂತನೆಯಲ್ಲಿ ಕಂಡು ಬಂದಂತೆ ಮನೋಹರ್ ತಂತ್ರಿಗಳು ಚಂದ್ರಮೌಳೀಶ್ವರ ದೇವಸ್ಥಾನ ಉಡುಪಿ ಇವರ ವೈದಿಕ ವಿಧಿ ವಿಧಾನದಲ್ಲಿ ಹೋಮ ನಡೆಯುತ್ತಿದೆ.