ಬಂಟ್ವಾಳ: ತಾಲೂಕು ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತ ಪರಿಷತ್ ಇದರ ಸಭೆ ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಬಂಟ್ವಾಳ ತಾಲೂಕು ಅಧ್ಯಕ್ಷ ವೇದಮೂರ್ತಿ ಶಿವರಾಮ ಮಯ್ಯ ಅವರ ಅಧ್ಯಕ್ಷತೆಯಲ್ಲಿ ಜರಗಿತು. ಜಿಲ್ಲಾಧ್ಯಕ್ಷ ವೇದಮೂರ್ತಿ ಕೃಷ್ಣರಾಜ ಭಟ್ ಪೊಳಲಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕೆ. ಸೂರ್ಯ ನಾರಾಯಣ ಭಟ್, ಜಿಲ್ಲಾ ಸಮಿತಿಯ ಬರೆಪ್ಪಾಡಿ ಶಂಕರನಾರಾಯಣ ಭಟ್, ಗುರಿಕಾರಕಾರ ಮುಗುಳಿ ತಿರುಮಲೇಶ್ವರ ಬಟ್, ರಘುರಾಮ ತಂತ್ರಿ, ಗುರುರಾಜ ತಂತ್ರಿ, ಶ್ರೀನಿಧಿ ಮುಚ್ಚಿನ್ನಾಯ ಎನ್. ಸುಬ್ರಹ್ಮಣ್ಯ ಭಟ್ ಮೊದಲಾದವರು ಭಾಗವಹಿಸಿದ್ದರು.
ನವರಾಜ ಭಟ್ ಸ್ವಾಗತಿಸಿದರು. ಎರುಂಬು ಶಂಕರ ನಾರಾಯಣಭಟ್ ವರದಿ ವಾಚಿಸಿದರು. ನಾರಾಯಣ ನಾವಡ ವಂದಿಸಿದರು.
ಮುಂದಿನ ಸಭೆಯನ್ನು 25 11 2020ರಂದು ಬಿಸಿರೋಡು ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಜರುಗಿಸಲು ತೀರ್ಮಾನಿಸಲಾಯಿತು.