ಬಂಟ್ವಾಳ: ಕೆ.ಎಸ್.ಆರ್.ಪಿ. ಎ.ಡಿ.ಜಿ.ಪಿ.ಅಲೋಕ್ ಕುಮಾರ್ ಅವರು ಗುರುವಾರ ಸಂಜೆ ಧರ್ಮಸ್ಥಳ ಮಂಜುನಾಥೇಶ್ವರ ದೇವಾಲಯ ಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಅವರು ಇಂದು ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ಪೋಲೀಸ್, ಎಂ.ಆರ್.ಪಿ.ಎಲ್, ಒ.ಎನ್.ಜಿ.ಸಿ.ಸಹಭಾಗಿತ್ವದಲ್ಲಿ ಕೆ.ಎಸ್.ಆರ್.ಪಿ. ವತಿಯಿಂದ ನಡೆದ “ಆರೋಗ್ಯಕ್ಕಾಗಿ ಓಟ” ಮ್ಯಾರಥಾನ್ ನಲ್ಲಿ ಭಾಗವಹಿಸಿ ಬಳಿಕ ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನ ಕ್ಕೆ ಭೇಟಿ ನೀಡಿದರು. ಬಂಟ್ವಾಳ ಡಿ.ವೈ.ಎಸ್.ಪಿ.ವೆಲೆಂಟೈನ್ ಡಿ.ಸೋಜ ಹಾಜರಿದ್ದರು.