ಸುಳ್ಯ : ಇಂದು (ಅ.೮) ಬೆಳಿಗ್ಗೆ ಸುಮಾರು 6:30 ಗಂಟೆಗೆ ಅಪರಿಚಿತ ದುಷ್ಕರ್ಮಿಗಳು ವ್ಯಕ್ತಿಯೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ನಗರದ ಶಾಂತಿನಗರದಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಶಾಂತಿನಗರ ನಿವಾಸಿ ಸಂಪತ್ ಹತ್ಯೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಸಂಪತ್ ವರ್ಷದ ಹಿಂದೆ ನಡೆದ ಸಂಪಾಜೆ ಕಳಗಿ ಬಾಲಚಂದ್ರರ ಕೊಲೆ ಪ್ರಕರಣದ ಆರೋಪಿ ಎಂಬ ಮಾಹಿತಿ ಇದೆ.
ಬೆಳಗ್ಗೆ ಕಾರಿನಲ್ಲಿ ಬಂದ ಅಪರಿಚಿತ ತಂಡವೊಂದು ಸಂಪತ್ಗೆ ಗುಂಡಿಕ್ಕಿದ್ದು ಗಾಯಾಳುವನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಇದೀಗ ಸಾವನ್ನಪ್ಪಿದ್ದಾರೆ ಎಂದು ತಿಳಿದಿದೆ.