Wednesday, October 18, 2023

ಧರ್ಮಸ್ಥಳದಲ್ಲಿ ಪ್ರಾರ್ಥನಾ ಸಮಾವೇಶ

Must read

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರದಲ್ಲಿ 22 ನೇ ವರ್ಷದ ಭಜನಾ ತರಬೇತಿ ಕಮ್ಮಟದ ಬದಲಾಗಿ ಸಾ೦ಕೇತಿಕವಾಗಿ ಪ್ರಾರ್ಥನಾ ಸಮಾವೇಶವು ಅತ್ಯಂತ ಯಶಸ್ವಿಯಾಗಿ ನಡೆಯಿತು.

ಪ್ರಾರ್ಥನಾ ಸಮಾವೇಶದಲ್ಲಿ ಸ೦ಪನ್ಮೂಲ ವ್ಯಕ್ತಿಗಳಾಗಿ ಮನೋರಮಾ ತೋಳ್ಪಾಡಿತ್ತಾಯ, ರಾಮಕೃಷ್ಣ ಕಾಟುಕುಕ್ಕೆ ಹಾಗೂ ರಾಜೇಶ್ ಪಡಿಯಾರ್ ಮು೦ತಾದ ಕಲಾವಿದರು ಶಿಬಿರಾರ್ಥಿಗಳಿಗೆ ಭಜನಾ ಅಭ್ಯಾಸವನ್ನು ಮಾಡಿಸಿದರು. ಹಿಮ್ಮೇಳದಲ್ಲಿ ಮಂಗಲದಾಸ ಗುಲ್ವಾಡಿ, ಹಾಗೂ ದೇವದಾಸ್ ಪ್ರಭು ಸಹಕರಿಸಿರುತ್ತಾರೆ.

ಪ್ರಾರ್ಥನಾ ಸಮಾವೇಶದಲ್ಲಿ ಶ್ರೀ ಮೋಹನದಾಸ ಸ್ವಾಮಿಜಿ, ಶ್ರೀಧಾಮ ಮಾಣಿಲ ಇವರು ಮಾರ್ಗರ್ದರ್ಶನ ನೀಡುತ್ತಾ ಸಮಾಜದ ಜನಸಾಮಾನ್ಯರಲ್ಲಿ ಧಾರ್ಮಿಕ ಭಾವನೆ ಉಳಿಸುವ ಪ್ರಯತ್ನ ಭಜನಾ ಕಮ್ಮಟದಿ೦ದ ಸಾಧ್ಯಾವಾಗಿದೆ. ಮಾನವೀಯ ಮೌಲ್ಯವನ್ನು ನಮ್ಮಲ್ಲಿ ಅಳವಡಿಸಿಕೊ೦ಡು ಪ್ರಕೃತಿ ಮತ್ತು ನಿಸರ್ಗವನ್ನು ಸ೦ರಕ್ಷಿಸಿ ಮು೦ದಿನ ಪೀಳಿಗೆಗೆ ಉಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಮನಸ್ಸನ್ನು ಪರಿಶುದ್ಢ ಮಾಡಿ ಭಗವ೦ತನನ್ನು ಪ್ರಾರ್ಥಿಸಿ ಎ೦ದು ಸ೦ದೇಶವನ್ನು ನೀಡಿದರು.

ಮುಖ್ಯ ಅಥಿತಿಗಳಾದ ಡಾ.ಗಣೇಶ್‌ ಅಮೀನ್ ಸ೦ಕಮಾರ್ ಇವರು ಭಗವ೦ತನ ಜಪಿಸಿ ನೆಲೆಯಾಗುವುದೇ ’ಭಜನೆ’. ಆಡ೦ಬರದ ಸ೦ಪತ್ತು ಬದುಕಲ್ಲ, ದೇವರ ಆರಾಧನೆಯೇ ಬದುಕಿನ ಸಾರ್ಥಕತೆ ಎ೦ದು ಶುಭ ನುಡಿದರು.

ಪ್ರಾರ್ಥನಾ ಸಮಾವೇಶದಲ್ಲಿ ಡಿ. ವೀರೇಂದ್ರ ಹೆಗ್ಗಡೆಯವರು, ಹೆಚ್ಚು ಜನ ಸೇರಿದರೆ ಅಪಾಯವೆ೦ದು ಅರಿತು ಸಾ೦ಕೇತಿಕವಾಗಿ ಈ ವರ್ಷ ಪ್ರಾರ್ಥನಾ ಸಮಾವೇಶವನ್ನು ನಡೆಸಿದ್ದೇವೆ. ಭಜನೆಯಿ೦ದ ಸ೦ಘಟನಾ ಶಕ್ತಿ, ಭಜನಾ ಮ೦ಡಳಿಗಳು ಉತ್ತಮ ರೀತಿಯಲ್ಲಿ ಭಜನಾ ಕಾರ್ಯಕ್ರಮವನ್ನು ನಡೆಸುತ್ತಿರುವುದರಿ೦ದ ಭಜನೆಯ ಬಗ್ಗೆ ಗೌರವ, ಶ್ರದ್ಧೆ, ಭಕ್ತಿ ಹೆಚ್ಚಾಗಿದೆ. ಮು೦ದಿನ ವರ್ಷದಿ೦ದ ಲಕ್ಷಾ೦ತರ ಜನರಿಗೆ ಭಜನಾ ಕಮ್ಮಟದ ತರಬೇತಿಯನ್ನು ವೀಕ್ಷಿಸಲು ಆನ್‌ಲೈನ್ ಮೂಲಕ ವ್ಯವಸ್ಥೆ ಮಾಡುವ ಬಗ್ಗೆ ಚಿ೦ತನೆ ಮಾಡಲಾಗುವುದು ಎ೦ದು ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದರು.

ಭಜನಾ ಕಮ್ಮಟದ ಸ೦ಚಾಲಕ ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿ, ಮಮತಾ ರಾವ್ ವ೦ದಿಸಿದರು.ಶ್ರೀನಿವಾಸ್‌ರಾವ್ ಕಾರ್ಯಕ್ರಮ ನಿರೂಪಿಸಿದರು.

More articles

Latest article