Wednesday, October 18, 2023

ಕಾಫಿ ಡೇ ಸ್ಪೆಶಲ್

Must read

 

ಕಪ್ಟಿನಲೆ ನಲಿವ
ಕರಿ ಮೋರೆ ಚೆಲುವೆ
ನಿನ್ನ ಹೀರದೆ ದಿನವೂ
ನಾನಿರಲಿ ಹೇಗೆ?

ಬೆಳಿಗ್ಗೆ ಎದ್ದೊಡನೆ
ನಿನ್ನದೇ ಕನವರಿಕೆ
ಬೇಗ ಕೈಸೇರದಿರೆ
ಅದೇನೋ ಚಡಪಡಿಕೆ

ಆಯಾಸವನೆ ನುಂಗಿ
ನೀರ್ಗುಡಿವ ನಿಲ್ದಾಣ
ತಲೆನೋವಿಗೂ ತಾನೆ
ನೀ ರಾಮಬಾಣ

ಒಳಗೊಳಗೆ ನಲಿವೆ
ಚೇತನವ ತೋರಿ
ಎಲ್ಲರೊಡನಿರುವೆ ನೀ
ಲಿಂಗಭೇದವ ತೂರಿ

ತಡಮಾಡದಿರು ಇನ್ನು
ತಾಳಲಾರೆನು ನಾನು
ತಣಿಸಿಬಿಡು ಬೇಗ ನೀ
ಜನಮನದ ಜೇನು

ನೀ.ಶ್ರೀಶೈಲ ಹುಲ್ಲೂರು
ಮಂದಹಾಸ ಬಸವೇಶ್ವರ ವೃತ್ತ
ಜಮಖಂಡಿ – 587301

More articles

Latest article