ಕಪ್ಟಿನಲೆ ನಲಿವ
ಕರಿ ಮೋರೆ ಚೆಲುವೆ
ನಿನ್ನ ಹೀರದೆ ದಿನವೂ
ನಾನಿರಲಿ ಹೇಗೆ?
ಬೆಳಿಗ್ಗೆ ಎದ್ದೊಡನೆ
ನಿನ್ನದೇ ಕನವರಿಕೆ
ಬೇಗ ಕೈಸೇರದಿರೆ
ಅದೇನೋ ಚಡಪಡಿಕೆ
ಆಯಾಸವನೆ ನುಂಗಿ
ನೀರ್ಗುಡಿವ ನಿಲ್ದಾಣ
ತಲೆನೋವಿಗೂ ತಾನೆ
ನೀ ರಾಮಬಾಣ
ಒಳಗೊಳಗೆ ನಲಿವೆ
ಚೇತನವ ತೋರಿ
ಎಲ್ಲರೊಡನಿರುವೆ ನೀ
ಲಿಂಗಭೇದವ ತೂರಿ
ತಡಮಾಡದಿರು ಇನ್ನು
ತಾಳಲಾರೆನು ನಾನು
ತಣಿಸಿಬಿಡು ಬೇಗ ನೀ
ಜನಮನದ ಜೇನು
ನೀ.ಶ್ರೀಶೈಲ ಹುಲ್ಲೂರು
ಮಂದಹಾಸ ಬಸವೇಶ್ವರ ವೃತ್ತ
ಜಮಖಂಡಿ – 587301