Thursday, October 19, 2023

ವಿಟ್ಲಪಡ್ನೂರು ಗ್ರಾಮದ ಪಕ್ಷದ ಪ್ರಮುಖರ ಸಭೆ

Must read

ವಿಟ್ಲ: ಭಾರತೀಯ ಜನತಾ ಪಾರ್ಟಿ ಬಂಟ್ವಾಳದ ವಿಟ್ಲಪಡ್ನೂರು ಗ್ರಾಮದ ಪಕ್ಷದ ಪ್ರಮುಖರ ಸಭೆಯು ಕಾಪುಮಜಲು ಮಲರಾಯಿ ಭಜನಾ ಮಂದಿರದಲ್ಲಿ ಜರುಗಿತು.

ಮಂಡಲ ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಳ, ಉಪಾಧ್ಯಕ್ಷ ಹಾಗೂ ವಿಟ್ಲಪಡ್ನೂರು ಗ್ರಾಮದ ಚುನಾವಣಾ ಪ್ರಭಾರಿಯಾದ ಜಯರಾಮ್ ನಾಯ್ಕ್ ಕುಂಟ್ರಕಲ ಇವರು ಸಭೆಯನ್ನು ನಡೆಸಿಕೊಟ್ಟರು.

ಮಾಣಿ ಮಹಾಶಕ್ತಿ ಕೇಂದ್ರದ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ರೈ ರಾಧುಕಟ್ಟೆ, ಪಕ್ಷದ ಪ್ರಮುಖ ನಾಗೇಶ್ ಶೆಟ್ಟಿ ಕೊಡಂಗಯಿ ಹಾಗು ಬೂತ್ ಅಧ್ಯಕ್ಷ ಕಾರ್ಯದರ್ಶಿ ಮತ್ತು ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರಿಗೆ ಪ್ರಾತಃಸ್ಮರಣೀಯರಾದ ಶ್ರದ್ಧೆಯ ಪಂಡಿತ ದೀನ ದಯಾಳ್ ಜೀಯವರ ಜನ್ಮ ದಿನಾಚರಣೆಯನ್ನು ಆಚರಿಸಲಾಯ್ತು.

More articles

Latest article