Wednesday, October 18, 2023

ಇಂದಿನಿಂದ ಬಾಕ್ರಬೈಲು ಮೂಲಕ ವಿಟ್ಲ-ಮಂಗಳೂರು ಬಸ್ ಸಂಚಾರ ಆರಂಭ

Must read

ಬಂಟ್ವಾಳ : ಕೊರೋನಾ ಲಾಕ್ ಡೌನ್ ನಿಂದಾಗಿ ಬಂದ್ ಆಗಿದ್ದ ಕಾಸರಗೋಡು-ದ.ಕ. ಜಿಲ್ಲೆಯ ಕೆಲವು ಗಡಿಗಳು ತೆರವಾಗುತ್ತಿವೆ. ಇದೀಗ ಬಾಕ್ರಬೈಲ್ ಮೂಲಕ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಇಂದಿನಿಂದ ಮಂಗಳೂರು-ಮುಡಿಪು-ಬಾಕ್ರಬೈಲು-ವಿಟ್ಲಕ್ಕೆ ಖಾಸಗಿ ಬಸ್ ಸಂಚಾರ ಆರಂಭಗೊಳ್ಳಲಿದೆ ಎಂಬ ಮಾಹಿತಿ ಇದೆ.
ಪ್ರಾರಂಭದಲ್ಲಿ ಕೆಲವು ಖಾಸಗಿ ಬಸ್ ಗಳು ಮಾತ್ರ ಸಂಚರಿಸಲಿವೆ. ನಂತರ ಪ್ರಯಾಣಿಕರ ಬೇಡಿಕೆಗನುಗುಣವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬಸ್ ಗಳು ಓಡಾಟ ನಡೆಸಲಿವೆ. ಕೊರೊನಾ ಕಾರಣದಿಂದ ಗಡಿ ಬಂದ್ ಹಿನ್ನೆಲೆ ಮುಡಿಪು- ಬಾಕ್ರಬೈಲು-ಸಾಲೆತ್ತೂರು ಮೂಲಕ ಸಂಚರಿಸುತ್ತಿದ್ದ ಬಸ್ಸುಗಳು ಸ್ಥಗಿತವಾಗಿದ್ದವು. ಬಸ್ ಸಂಚಾರವಿಲ್ಲದೆ, ಈ ಭಾಗದಲ್ಲಿದ್ದ ಜನತೆ ಸಂಕಷ್ಟ ಅನುಭವಿಸುತ್ತಿದ್ದರು. ಅಗತ್ಯ ಸೇವೆಗಳ ಲಭ್ಯತೆಗೆ ಪರದಾಡುತ್ತಿದ್ದರು. ಉದ್ಯೋಗ, ಆರೋಗ್ಯ ಸೇವೆ ಸೇರಿದಂತೆ ಇತರ ಅಗತ್ಯತೆಗಳಿಗೆ ಕೇರಳ ಗಡಿ ಭಾಗದವರು ಕರ್ನಾಟಕವನ್ನೇ ಅವಲಂಭಿಸಿದ್ದರು. ಆದರೆ, ಸಂಚಾರ ಬಂದ್ ಆಗಿದ್ದರಿಂದ ಪರದಾಡುವಂತಾಗಿತ್ತು.
ಆ ಭಾಗದ ಸ್ಥಳೀಯರು ಗಡಿ ಮೂಲಕ ಸಂಚಾರಕ್ಕೆ ಅವಕಾಶ ನೀಡಬೇಕೆಂದು ನಿರಂತರ ಆಗ್ರಹಗಳನ್ನು ಮಾಡಿಕೊಳ್ಳುತ್ತಲೇ ಇದ್ದರೂ ಕೂಡ, ಸಂಚಾರಕ್ಕೆ ಅವಕಾಶ ಸಿಕ್ಕಿರಲಿಲ್ಲ. ಅಂತಿಮವಾಗಿ ಇದೀಗ ಈ ಭಾಗದಲ್ಲಿ ಖಾಸಗಿ ಬಸ್ ಸಂಚಾರಕ್ಕೆ ಅನುಮತಿ ಸಿಕ್ಕಿದ್ದು, ಆ ಪ್ರದೇಶದ ಜನರಿಗೆ ಸಮಾಧಾನ ಆದಂತಿದೆ.

More articles

Latest article