Sunday, October 22, 2023

ಅಜಿಲಮೊಗರು ಶ್ರೀ ಗುರು ಫ್ರೆಂಡ್ಸ್ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುವರ್ಯರ ಜನ್ಮಾಚರಣೆ ಮತ್ತು ಗೌರವಾರ್ಪಣೆ ಕಾರ್ಯಕ್ರಮ

Must read

ಬಂಟ್ವಾಳ: ಬ್ರಹ್ಮಶ್ರೀ ನಾರಾಯಣ ಗುರು ಜನ್ಮಾಚರಣೆ ಪ್ರಯುಕ್ತ ಅಜಿಲಮೊಗರು ಶ್ರೀ ಗುರು ಫ್ರೆಂಡ್ಸ್ ಇದರ ಅಧ್ಯಕ್ಷ ನವೀನ್ ಶಾಂತಿ ಅಡ್ಯಾಲ್ ಇವರ ಮನೆಯಲ್ಲಿ ಗುರುವರ್ಯರ ಪೂಜಾ ಕಾರ್ಯಕ್ರಮ ನಡೆಯಿತು.

ಈ ದೇವತಾ ಕಾರ್ಯದಲ್ಲಿ ಸಮಾಜ ಸೇವಕ, ಕಲ್ಯಾಣಿ ಕ್ಯಾಟರಿಂಗ್ ನ ಮಾಲಕ ಲೋಕೇಶ್ ಪೂಜಾರಿ ಪುಣ್ಕೆದಡಿ ಅಜಿಲಮೊಗರು, ಉಮೇಶ್ ಪೂಜಾರಿ ಕೋಡಿ ಹಂಡೀರು, ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ.) ಮೂಲಕ ಸಮಾಜ ಸೇವೆ ಮಾಡುತ್ತಿರುವ ನೀತು ಪೂಜಾರಿ ಅಜಿಲಮೊಗರು ಮತ್ತು ಬಹುಮುಖ ಪ್ರತಿಭೆ ಗುರುರಾಜ್ ಪೂಜಾರಿ ಕುಂಟೋನಿ ಇವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ನವೀನ್ ಶಾಂತಿ ಕೋಕಳ, ಧನಂಜಯ ಶೆಟ್ಟಿ ಸರಪಾಡಿ, ಹಿರಿಯರಾದ ರಾಘವ ಪೂಜಾರಿ ಅಡ್ಯಾಲ್, ಸೀತಾರಾಮ ಪೂಜಾರಿ ತಿಂಗಳಾಡಿ ಗುತ್ತು, ನಾರಾಯಣ ಪೂಜಾರಿ ತಿಂಗಳಾಡಿ, ಉದಯವಾಣಿಯ ಸಂಪಾದಕ ಕಿರಣ್ ಭಂಡಾರಿ ಸರಪಾಡಿ, ಶ್ರೀ ಗುರು ಫ್ರೆಂಡ್ಸ್ ನ ಗೌರವಾಧ್ಯಕ್ಷ ಹರೀಶ್ ಪೂಜಾರಿ ಕೋಡಿ, ಶ್ರೀ ಗುರು ಫ್ರೆಂಡ್ಸ್ ನ ಅಧ್ಯಕ್ಷ ನವೀನ್ ಶಾಂತಿ ಅಡ್ಯಾಲ್ ಮತ್ತು ಸದಸ್ಯರು ಉಪಸ್ಥಿತರಿದ್ದರು. ಈ ಪುಣ್ಯ ಕಾರ್ಯದ ಹಿಂದಿನ ರೂವಾರಿ ನವೀನ್ ಶಾಂತಿ ಅಡ್ಯಾಲ್ ಇವರ ನಿಸ್ವಾರ್ಥ ಕಾರ್ಯವು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ.

More articles

Latest article