Thursday, October 26, 2023

ಕಲ್ಮಂಜ ಯುವಕರ ಸಮಾಜ ಸೇವಾ ಕಾರ್ಯ

Must read

ಬೆಳ್ತಂಗಡಿ: ಕಲ್ಮಂಜ ವಿ.ಹಿಂ.ಪ.ಭಜರಂಗದಳ, ಸಾರ್ವಜನಿಕ ಗಣೇಶೋತ್ಸವ ಸಮಿತಿ, ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕ, ಗ್ರಾ.ಪಂ. ಕಲ್ಮಂಜ ಹಾಗೂ ಊರವರ ಸಹಕಾರದಿಂದ ಕಲ್ಮಂಜ ಗ್ರಾಮದ ಸತ್ಯನಪಲ್ಕೆ ಬಳಿಯಿಂದ ಮಾಣಿಂಜೆವರೆಗಿನ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದಿದ್ದ ಪೊದೆಗಳ ಸ್ವಚ್ಚತೆ ಮತ್ತು ಸ.ಹಿಪ್ರಾ.ಶಾಲೆ ಸಿದ್ದಬೈಲು ಪರಾರಿ ಇಲ್ಲಿನ ಶಾಲಾ ಪರಿಸರದ ಸ್ವಚ್ಚತಾ ಕಾರ್ಯ ನಡೆಸಲಾಯಿತು.

ಸ್ವಚ್ಛ ದೇಶ ನಮ್ಮ ದೇಶ ಆಗಬೇಕು ಎನ್ನುವ ಕನಸಿಗೆ ಅಳಿಲು ಸೇವೆಯಂತೆ ತಮ್ಮ ತಂಡದೊಂದಿಗೆ ಸಮಾಜಕ್ಕೆ ಸೇವೆ ನೀಡುತ್ತ ಬಂದಿದ್ದು, ಸಮಾಜಕ್ಕೆ ಮಾದರಿ ತಂಡವಾಗಿ ಬೆಳೆದು ನಿಂತಿದೆ.
ಬಿಡುವಿನ ವೇಳೆ ಈ ಯುವಕರ ತಂಡ ಮಗದೊಮ್ಮೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡಿತು.

ಈ ಶ್ರಮದಾನದಲ್ಲಿ ಅನಿಲ್, ಉಮೇಶ್, ಮುರಳಿ, ಪ್ರವೀಣ್, ಸಾಂತಪ್ಪ, ಸತ್ಯ ಪ್ರಸಾದ್, ಕುಶಾಲಪ್ಪ, ಪುರುಷೋತ್ತಮ, ಮಧುರಾಜ್, ಸುಮಂತ್, ಭಾಗವಹಿಸಿದ್ದರು.

More articles

Latest article