ಬಂಟ್ವಾಳ: ಅಮ್ಟೂರು ಗ್ರಾಮದ ಭಾರತೀಯ ಜನತಾ ಪಾರ್ಟಿ 182 ಬೂತ್ ಸಮಿತಿ ವತಿಯಿಂದ ಅಮ್ಟೂರು ಗ್ರಾಮದ ಹಿರಿಯ ಬಿಜೆಪಿ ನಾಯಕಿ ವಿಶಾಲ ಡಿ. ಶೆಟ್ಟಿ ಬಾಳಿಕೆ ಇವರನ್ನು ತಾ.ಪಂ. ಮಾಜಿ ಉಪಾಧ್ಯಕ್ಷ ದಿನೇಶ್ ಅಮ್ಟೂರು ಸನ್ಮಾನಿಸಿದರು.
ಬಳಿಕ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಕಳೆದ ಕೆಲವು ವರ್ಷಗಳಿಂದ ಅಮ್ಟೂರು ಗ್ರಾಮದಲ್ಲಿ ಹಲವು ಹಿರಿಯರಾದ ಪುಂಡಲಿಕ ಪ್ರಭುಗಳು, ರಮೇಶ್ ಶೆಟ್ಟಿಗಾರ್, ಕರಿಂಗಾಣ, ಸಂಜೀವ ಪೂಜಾರಿ, ಸೀತಾರಾಮ ಶೆಟ್ಟಿ, ಲಕ್ಷ್ಮಿ ಪ್ರಭು ಇವರೊಂದಿಗೆ ಸೇರಿ ಪಕ್ಷ ಸಂಘಟನೆ ಮಾಡಿಕೊಂಡು ಪಂಚಾಯತ್ ಸದಸ್ಯರನ್ನು ಗೆಲ್ಲಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿಕೊಂಡು ಪಕ್ಷ ಸಂಘಟನೆ ಮಾಡಿದಂತ ನಾಯಕಿ. ಅದಲ್ಲದೆ ಕಳೆದ ಕೆಲವು ದಿನಗಳಲ್ಲಿ ಅಮ್ಟೂರು ಗ್ರಾಮದ ಪರಿಶಿಷ್ಟ ಜಾತಿ ಕಾಲೊನಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪಾಡಿಗುತ್ತು ಇವರ ಅನುದಾನದಲ್ಲಿ ಹಾಗೂ ತಾ.ಪಂ. ಸದಸ್ಯರ, ಜಿ.ಪಂ. ಸದಸ್ಯರ ಕಾಂಕ್ರಿಟೀಕರಣ ಆಗುವಂಥ ಸಂದರ್ಭದಲ್ಲಿ ಕಾಂಕ್ರಿಟೀಕರಣ ಆಗುವಾಗ ಒಂದು ತಿಂಗಳಿನಿಂದ ನೀರನ್ನು ಕೊಟ್ಟು ಸಹಕರಿಸಿದಂತ ಹಿರಿಯ ನಾಯಕಿ ಡಿ. ವಿಶಾಲ ಶೆಟ್ಟಿ ಬಾಳಿಕೆ ಎಂದು ಅಮ್ಟೂರು ಹೇಳಿದರು. ಅದಲ್ಲದೇ ಪರಿಶಿಷ್ಟ ಜಾತಿ ಕಾಲೊನಿ ಶಾಂತಿ ಪಳಿಕೆ ಈ ಒಂದು ರಸ್ತೆಗೆ ಸಹಕರಿಸಿದ ಎಲ್ಲ ಗ್ರಾಮಸ್ಥರಿಗೂ ಅಭಿನಂದನೆಯನ್ನು ತಿಳಿಸಿದರು
ಅಧ್ಯಕ್ಷ ಪ್ರಭಾಕರ ಶೆಟ್ಟಿ ಬೈದರಡ್ಕ ಶಾಲು ಹೊದಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಶೆಟ್ಟಿಗಾರ್, ಹಿರಿಯರಾದ ಕಾಂತಪ್ಪ ಶೆಟ್ಟಿ ಬಾಳಿಕೆ, ಪುರುಷೋತ್ತಮ ಟೈಲರ್, ಹರೀಶ್ ಭಟ್ಟ ಹಿತ್ಲು ರತಿನ್ ಕುಮಾರ್ ವಿಖ್ಯಾತ್ ಶೆಟ್ಟಿ ಬಾಳಿಕೆ ಉಪಸ್ಥಿತರಿದ್ದರು.