ಬೆಳ್ತಂಗಡಿ: ಮಡಂತ್ಯಾರ್ ಕ್ಲಸ್ಟರ್ ನ ಎಸ್.ಕೆ.ಎಸ್.ಎಸ್.ಎಫ್. ಕಛೇರಿಯು ಎನ್.ಸಿ. ರೋಡ್ ನಲ್ಲಿ ಉದ್ಘಾಟನೆಗೊಂಡಿತು. ಎಸ್.ಕೆ.ಎಸ್.ಎಸ್.ಎಫ್. ಜಿಲ್ಲಾಧ್ಯಕ್ಷ ಅಮೀರ್ ತಂಙಲ್ ಕಿನ್ಯ ಉದ್ಘಾಟಿಸಿ ದುಆಃದ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನ ನೀಡಿದರು. ಎಸ್.ಕೆ.ಎಸ್.ಎಸ್.ಎಫ್. ಜಿಲ್ಲಾ ಉಪಾಧ್ಯಕ್ಷ ಸಿದ್ದೀಕ್ ಅಬ್ದುಲ್ ಖಾದರ್ ಬಂಟ್ವಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ಥಳೀಯ ಮಸೀದಿಯ ಖತೀಬರಾದ ಆದಂ ಮುಸ್ಲಿಯಾರ್ ದೂಮಳಿಕೆ ಹಾಗೂ ಎಸ್.ಕೆ.ಎಸ್.ಎಸ್.ಎಫ್. ಮಡಂತ್ಯಾರ್ ಕ್ಲಸ್ಟರ್ ಇಬಾದ್ ಕಾರ್ಯದರ್ಶಿ ಸಿರಾಜುದ್ದೀನ್ ದಾರಿಮಿ ಉಸ್ತಾದರು ಆಶಂಸ ಭಾಷಣವನ್ನು ಮಾಡಿದರು. ಎಸ್.ಕೆ.ಎಸ್.ಎಸ್.ಎಫ್. ಜಿಲ್ಲಾ ಸಮಿತಿಯ ಕೋಶಾಧಿಕಾರಿ ಹನೀಫ್ ದೂಮಳಿಕೆ, ಮಡಂತ್ಯಾರ್ ಕ್ಲಸ್ಟರ್ ನ ಎಸ್.ಕೆ.ಎಸ್.ಎಸ್.ಎಫ್. ಕೋಶಾಧಿಕಾರಿ ಅಬ್ದುಲ್ ರಹ್ಮಾನ್ ಬಂಗೇರಕಟ್ಟೆ, ಉಪಾಧ್ಯಕ್ಷ ಅಬುಸ್ವಾಲಿಹ್ ಎನ್.ಸಿ. ರೋಡ್ ಉಪಸ್ಥಿತರಿದ್ದರು.
ಮಡಂತ್ಯಾರ್ ಕ್ಲಸ್ಟರ್ ಎಸ್.ಕೆ.ಎಸ್.ಎಸ್.ಎಫ್. ನ ಅಧ್ಯಕ್ಷ ಹಾಶಿಂ ಫೈಝಿ ಉಸ್ತಾದರು ಸ್ವಾಗತಿಸಿದರು. ಎಸ್.ಕೆ.ಎಸ್.ಎಸ್.ಎಫ್. ಬೆಳ್ತಂಗಡಿ ವಲಯ ತ್ವಲಬಾ ಕಾರ್ಯದರ್ಶಿ ತಹ್ಸೀನ್ ಪುಂಜಾಲಕಟ್ಟೆ ವಂದಿಸಿದರು.