ಬೆಳ್ತಂಗಡಿ: ನೂತನವಾಗಿ ಶುಭಾರಂಭಗೊಂಡ ಕೋರ್ಟ್ ರಸ್ತೆಯ ಧರ್ಮಶ್ರೀ ಬಿಲ್ಡಿಂಗ್ ನಲ್ಲಿ ಯುವ ವಕೀಲ ಯತೀಶ್ ಶೆಟ್ಟಿ ಅವರ ವಕೀಲರ ಕಛೇರಿ ಉದ್ಘಾಟನೆ ಕಾರ್ಯಕ್ರಮ ನಡೆಯಿತು.
ನಾಲ್ಕು ವರ್ಷಗಳ ಕಾಲ ಕಿರಿಯ ವಕೀಲನಾಗಿ ವೃತ್ತಿ ನಿರ್ವಹಿಸಿ ಇದೀಗ ಸ್ವಂತ ಕಚೇರಿಯನ್ನು ಆರಂಭಿಸುವ ಮೂಲಕ ತನ್ನ ವೃತ್ತಿಯಲ್ಲಿ ಇನ್ನೊಂದು ಹೆಜ್ಜೆಯನ್ನಿಟ್ಟಿದ್ದಾರೆ.
ಈ ಕಾರ್ಯಕ್ರಮವು ಶಾಸಕ ಹರೀಶ್ ಪೂಂಜಾ, ಪಿ. ಕರುಣಾಕರ್, ಪ್ರಸಾದ್ ಕೆ.ಎಸ್. ಹಾಗು ಗಣ್ಯರ ಉಪಸ್ಥಿತಿಯಲ್ಲಿ ನಡೆಯಿತು.