ಬಂಟ್ವಾಳ: ಇಲ್ಲಿನ ಎಲ್ಲೈಸಿ ಅಭಿವೃದ್ಧಿ ಅಧಿಕಾರಿ ಮಧ್ವರಾಜ್ ಬಿ.ಕಲ್ಮಾಡಿ ಇವರನ್ನು ಲಯನ್ಸ್ ಕ್ಲಬ್ಬಿನ ಜೀವ ವಿಮಾ ಜಾಗೃತಿ ಜಿಲ್ಲಾ ಸಂಚಾಲಕರಾಗಿ ಲಯನ್ಸ್ ಗವರ್ನರ್ ಡಾ.ಗೀತಾ ಪ್ರಕಾಶ್ ನೇಮಕಗೊಳಿಸಿದ್ದಾರೆ. ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ, ಜಿಲ್ಲಾ ಮಟ್ಟದ ಸಾಂಸ್ಕೃತಿಕ ರಾಯಭಾರಿಯಾಗಿ, ವಿಶೇಷ ಚೈತನ್ಯ ಮಕ್ಕಳ ಜಿಲ್ಲಾ ಸಂಚಾಲಕರಾಗಿ ಮಧ್ವರಾಜ್ ಅನುಭವ ಹೊಂದಿದ್ದಾರೆ. ಒಟ್ಟು 120ಕ್ಕೂ ಮಿಕ್ಕಿ ವಿಮಾ ಪ್ರತಿನಿಧಿಗಳು ಮತ್ತು 40 ವಿಮಾ ಗ್ರಾಮ ಯೋಜನೆ ಅನುಷ್ಠಾನಗೊಳಿಸಿ ಚಿನ್ನದ ಪದಕ ವಿಜೇತರಾಗಿ ಇವರು ಗುರುತಿಸಿಕೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.