ಚಿತ್ರ: ಕಿಶೋರ್ ಪೆರಾಜೆ
ಬಂಟ್ವಾಳ: ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ ರಮಾನಾಥ ರೈ ಯವರ ಸಾರಥ್ಯದಲ್ಲಿ
ಜಕ್ರಿಬೆಟ್ಟು ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣಾ ಸಮಿತಿ ವತಿಯಿಂದ
ನಡೆಯುವ 17ನೇ ವರ್ಷದ ಶ್ರೀ ಗಣೇಶೋತ್ಸವ ಬಂಟ್ವಾಳ ಹನುಮಾನ್ ದೇವಾಲಯ ದ ಹಾಲ್ ನಲ್ಲಿ ನಡೆಯಿತು.
ಜಕ್ರಿಬೆಟ್ಟುವಿನಲ್ಲಿ ನಡೆಯುತ್ತಿದ್ದ ಶ್ರೀ ಗಣಶೋತ್ಸವ ಈ ಬಾರಿ ಕೋವಿಡ್ 19 ನ ಹಿನ್ನೆಲೆಯಲ್ಲಿ ಸರಕಾರದ ನಿಯಮದಂತೆ ಯಾವುದೇ ಕಾರ್ಯಕ್ರಮ ವಿಲ್ಲದೆ ಸಾಂಕೇತಿಕವಾಗಿ ಗಣೇಶ ಪ್ರತಿಷ್ಠೆ ಬಳಿಕ ಧಾರ್ಮಿಕ ಕಾರ್ಯಕ್ರಮ ಗಳು ನಡೆಯಿತು.
ದೇವರಿಗೆ ಮಧ್ಯಾಹ್ನ ನದ ಮಹಾಪೂಜೆ ಬಳಿಕ ಸಂಜೆಯ ವೇಳೆ ಗಣೇಶನ ವಿಸರ್ಜನೆ ನಡೆಸಲಾಗುವುದು.