ಬೆಳ್ತಂಗಡಿ: ಆಫ್ರಿಕನ್ ಬಸವನ ಹುಳುಗಳು ರೈತರಿಗೆ ಸಿಂಹ ಸ್ವಪ್ನವಾಗಿದೆ ಎನ್ನಬಹುದು. ಅದರ ಉಪಟಳದಿಂದಾಗಿ ಇನ್ನೂ ಹೆಚ್ಚು ನಷ್ಟ ಸಂಭವಿಸುವ ಸಾಧ್ಯತೆ ಇದೆ ಹಾಗಾಗಿ ಪರಿಹಾರ ನೀಡಲು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಲ್ಲಿ ಮನವಿ ಸಲ್ಲಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲಾ ಭಾ.ಜಾ.ಪ ರೈತ ಮೋರ್ಚದ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಸುಳ್ಯ ಇವರ ಮುಖಾಂತರ ಕಣಿಯೂರಿನ ಗ್ರಾ.ಪಂ. ನ ಮಾಜಿ ಅಧ್ಯಕ್ಷ ಸುನಿಲ್ ಸಾಲ್ಯಾನ್ ಇವರು ಉರುವಾಲು, ಕಣಿಯೂರು, ಮಚ್ಚಿನ, ತಣ್ಣೀರುಪಂತ ಗ್ರಾಮದ ರೈತರ ನಿದ್ದೆಗೆಡಿಸಿದ ಆಫ್ರಿಕನ್ ಬಸವನ ಹುಳದ ಸಮಸ್ಯೆಯ ಬಗ್ಗೆ ಶೀಘ್ರವೇ ಸ್ಪಂದಿಸುವಂತೆ ಮನವಿ ಸಲ್ಲಿಸಿದರು.