Sunday, October 22, 2023

ನೂತನ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದ ಅಭಿವೃದ್ಧಿ ಅಧಿಕಾರಗಳ ಕ್ಷೇಮಾಭಿವೃದ್ಧಿ ಸಂಘ

Must read

ಬಂಟ್ವಾಳ: ನೂತನ ಜಿಲ್ಲಾಧಿಕಾರಿಗಳನ್ನು ಇಂದು ದ.ಕ ಜಿಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಭೇಟಿ ಮಾಡಿ ಅಭಿನಂದನೆಗಳನ್ನು ಸಲ್ಲಿಸಲಾಯಿತು. ಜತೆಗೆ ಕಂದಾಯ ಜಮೀನು ಸಂಬಂಧಿಸಿದಂತೆ ಗ್ರಾಮ ಪಂಚಾಯತ್ ಎದುರಿಸುವ ಸಮಸ್ಯೆಗಳನ್ನು ಪರಿಹರಿಸುವಂತೆ ಕೋರಿ ಮನವಿ ಸಲ್ಲಿಸಲಾಯಿತು. ಜಿಲ್ಲಾಧಿಕಾರಿಗಳು ನಮ್ಮ ಮನವಿಯ ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ನೀಡಿ ನಮ್ಮ ಸಂಘದ ರಚನಾತ್ಮಕ ಕಾರ್ಯದ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಜಿಲ್ಲಾ ಅಧ್ಯಕ್ಷ ನಾಗೇಶ್ ಎಂ. ಜಿಲ್ಲಾ ಪದಾಧಿಕಾರಿಗಳಾದ ಯಶವಂತ್, ಶಿವಾನಂದ ಕೆ, ಪೂರ್ಣಿಮಾ , ಸಾಯಿಷ್ ಚೌಟ ಉಪಸ್ಥಿತರಿದ್ದರು.

More articles

Latest article